ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಮತ್ತು ರೋಟರಿ ಕ್ಲಬ್ ಸಾಹೇಬರಕಟ್ಟೆ ಇದರ ಜಂಟಿ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಮಕ್ಕಳಲ್ಲಿ ರಾಷ್ಟ್ರೀಯ ಭಾವಕ್ಯತೆಯನ್ನು ಉದ್ದೀಪನಗೊಳಿಸುವ ಸಲುವಾಗಿ ಹಾಗೂ ನಮ್ಮ ಸೈನಿಕರ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ನಿರ್ಮಿಸಲಾದ ನೈಜ ಕಥೆಯನ್ನು ಒಳಗೊಂಡ ‘ಭಾರತೀಯ ಸೈನಿಕರು ‘ ಎನ್ನುವ ಸಾಕ್ಷ್ಯ ಚಿತ್ರವನ್ನು ಮಹಾತ್ಮಾ ಗಾಂಧಿ ಪ್ರೌಢಶಾಲೆ ಯಲ್ಲಿ ಪ್ರದರ್ಶಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಯು ಪ್ರಸಾದ್ ಆರ್ ಭಟ್, ಕಾರ್ಯದರ್ಶಿ ಅಣ್ಣಯ್ಯ ದಾಸ್ , ವಲಯ ಪ್ರತಿನಿಧಿ ವಿಜಯ ಕುಮಾರ್ ಶೆಟ್ಟಿ. ರೋ. ರಾಮ ಪ್ರಕಾಶ್ ರೋ. ನೀಲಕಂಠ ರಾವ್ ,ಶಿಕ್ಷಕ ರೋ ಗಣೇಶ್ ನಾಯಕ್, ಸಂಸ್ಥೆಯ ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.