ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾ ಅಧ್ಯಕ್ಷ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ಬುಧವಾರ ಉಡುಪಿಯ ಗರಡಿಮಜಲು ತೆಂಕನಿಡಿಯೂರು ಆಟೋ ನಿಲ್ದಾಣ ಚಾಲಕರಿಗೆ ಖಾಕಿ ವಸ್ತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಕೆ.ಕೃಷ್ಣಮೂರ್ತಿ ಆಚಾರ್ಯ, ನಗರಸಭೆಯ ಸದಸ್ಯರಾದ ಶ್ರೀಮತಿ ಅಮೃತ ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟ್ಟು,ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು ಕಾರ್ಯದರ್ಶಿ ಪ್ರಸಾದ್ ಜೋಗಿ . ಸುರೇಶ್ ರಥಬೀದಿ, ನಿಲ್ದಾಣದ ಸದಸ್ಯರುಗಳಾದ ವಿದ್ಯಾಧರ, ಅಬ್ದುಲ್ ರಜಾಕ್, ಜಯ,ಮಹೇಂದರ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.