ಸಂಪುಟಕ್ಕೆ 7 ಶಾಸಕರು~ಸುನಿಲ್‌ ಕುಮಾರ್‌ ಇನ್..?

ಭಾನುವಾರ ಹೊಸದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ವಾಪಸು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಸಂಪುಟಕ್ಕೆ ಸೇರಲಿರುವ 7 ಮಂದಿ ಹೆಸರುಗಳನ್ನು ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕೆಐಎಬಿಯಿಂದ ಹೊರ ಬರುತ್ತಿದ್ದಂತೆ ಸಿಎಂ ಬಿಎಸ್ವೈಗೆ ಕರೆ ಮಾಡಿ ಬಿಜೆಪಿ ವರಿಷ್ಠರು ಮಾಹಿತಿ ನೀಡಿದ್ದಾರೆ. ಹೀಗಾಗಿ, ಸಚಿವ ಸಂಪುಟ ವಿಸ್ತರಿಸಲು ಸಿಎಂ ಬಿಎಸ್ವೈಗೆ ಅನುಮತಿ ಸಿಕ್ಕಿದೆ.

ನೂತನ ಸಚಿವರಾಗುವ ಸಂಭಾವ್ಯರ ಪಟ್ಟಿಯಲ್ಲಿ ಎಂ.ಟಿ.ಬಿ. ನಾಗರಾಜ್, ಮುನಿರತ್ನ, ಆರ್.ಶಂಕರ್, ಉಮೇಶ್‌ ಕತ್ತಿ, ಸಿ.ಪಿ.ಯೋಗೀಶ್ವರ್, ಹಾಲಪ್ಪ ಆಚಾರ್, ಸುನಿಲ್‌ ಕುಮಾರ್‌ ಹಾಗೂ ಅರವಿಂದ್‌ ಲಿಂಬಾವಳಿಯ ಹೆಸರು ಪ್ರಮುಖವಾಗಿ ಕೇಳಿಬಂದಿದೆ.

 
 
 
 
 
 
 
 
 
 
 

Leave a Reply