ಸಾಲಿಗ್ರಾಮ : ಕರ್ನಾಟಕ ಬ್ಯಾಂಕ್ ನ ಸಾಲಿಗ್ರಾಮ ಶಾಖೆಯಲ್ಲಿ 4 ವರ್ಷದಿಂದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ಕುಮಟಾ ಶಾಖೆಗೆ ವರ್ಗಾವಣೆಗೊಂಡ ರಾಮಕೃಷ್ಣ ಕಾರಂತರನ್ನು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಹಾಗೂ ಸಾಲಿಗ್ರಾಮದ ಸಮಾನ ಮನಸ್ಕರಿಂದ ಏಪ್ರಿಲ್ 20 ರಂದು ಸಾಲಿಗ್ರಾಮ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ರಾಮಕೃಷ್ಣ ಕಾರಂತರನ್ನು ಸಾಲಿಗ್ರಾಮದ ಸಮಾನ ಮನಸ್ಕರು ಸೇರಿ ಶಾಲು ಹೊದಿಸಿ ಗೌರವಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಕಾರಂತ್, ಕಾರ್ಕಡ ರಾಜು ಪೂಜಾರಿ, ಉಮೇಶ್ ಉಡುಪ, ಪ್ರಭಾಕರ್ ಕಾಮತ್, ನರಸಿಂಹ ಐತಾಳ್ (ಸಂಬಂಧ) ಹಾಗೂ ಶಾಖೆಯ ಸಿಬ್ಬಂದಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.