ಬಂಟಕಲ್ಲು: ಪಿ.ಎನ್. ಆಚಾರ್ಯರಿಂದ ಜಲವರ್ಣ ಚಿತ್ರ ಪ್ರಾತ್ಯಕ್ಷಿಕೆ

ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಇವರು ಇನ್ನಂಜೆ ಎಸ್.ವಿ.ಹೆಚ್. ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಶಿಬಿರದಲ್ಲಿ ನಾಡಿನ ಹಿರಿಯ ಕಲಾವಿದ ಪಿ.ಎನ್. ಆಚಾರ್ಯರಿಂದ ಹಲವಾರು ಜಲವರ್ಣ ಚಿತ್ರ ಪ್ರಾತ್ಯಕ್ಷಿಕೆ ಹಾಗೂ ನೂಲಿನ ಚಿತ್ರ ಪ್ರಾತ್ಯಕ್ಷಿಕೆ ಬಹಳ ಸುಂದರವಾಗಿ ಮೂಡಿ ಬಂತು. ೬೦ಕ್ಕಿಂತಲೂ ಜಾಸ್ತಿ ಇಂಜಿನಿಯರಿoಗ್ ವಿದ್ಯಾಥಿಗಳು ಶಿಬಿರಾರ್ಥಿಗಳಾಗಿದ್ದ ಈ ಶಿಬಿರದಲ್ಲಿ ಕಾರ್ಯಕ್ರಮಾಧಿಕಾರಿ ಶ್ರೀನಾಗರಾಜ್ ರಾವ್, ಹಿರಿಯ ಪ್ರಾಧ್ಯಾಪಕರಾದ ಡಾ. ಉದಯ ಪ್ರಸನ್ನ ಹೆಚ್., ಪ್ರಿನ್ಸಿಪಾಲರಾದ ಪುಂಡರೀಕಾಕ್ಷ ಕೊಡಂಚ ಹಾಗೂ ನಿರ್ದೇಶಕರಾದ ಡಾ. ತಿರುಮಲೇಶ್ವರ ಭಟ್‌ರವರ ಉಪಸ್ಥಿತಿಯಲ್ಲಿ ನಡೆಯಿತು.

 
 
 
 
 
 
 
 
 
 
 

Leave a Reply