ಕಾನೂನು ಕಾಲೇಜಿನಲ್ಲಿ “ಸದೃಢ ಭಾರತ ಓಟ” ಕಾಯ೯ಕ್ರಮ

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಇಂದು ಸದೃಢ ಭಾರತ ಓಟ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು.  ಬಾವುಟ ತೋರಿಸುದರ ಮೂಲಕ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾ​ಲೆ  ಪ್ರೊ.(ಡಾ) ನಿಮ೯ಲಾ ಹರಿಕೃಷ್ಣರವರು ಮಾತನಾಡಿ ಭಾರತದ ಪ್ರತಿಯೊಬ್ಬರು ಆರೋಗ್ಯವಂತ ಹಾಗೂ ಸದೃಢ ಪ್ರಜೆಗಳಾಗಲು ಇಂತಹ ಕಾಯ೯ಕ್ರಮಗಳನ್ನು ಆಯೋಜಿಸುವುದು ತೀರಾ ಅಗತ್ಯವಿದ್ದು ಸವ೯ರೂ ಇದರ ಲಾಭವನ್ನು ಪಡೆಯ ಬೇಕು ಹಾಗೂ ಆ ಮೂಲಕ ಸೋಮಾರಿತನ, ಒತ್ತಡ ಆತಂಕ​ಗಳಿಂದ  ಹೊರಬರಲು ಪ್ರಯತ್ನಿಸಬೇಕೆಂದು ಕರೆಯಿತ್ತರು.ಕಾಲೇಜಿನ ದೈಹಿಕ ಶಿಕ್ಷಣ ನಿದೇ೯ಶಕಪ್ರಕಾಶ್ ರಾವ್ ಡಿ​ ​ ಪ್ರಾಸ್ತಾವಿಕವಾಗಿ ಮಾತನಾಡಿ ಫಿಟ್ ಇಂಡಿಯಾ​ಸ್ವಾತಂತ್ರ್ಯ ​​ಓಟದ ​ಬಗ್ಗೆ ಮಾತನಾಡಿದರು . ​ನಗರದ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಿ​ದ್ದ  ಓಟದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಗ೯ದವರು ಹಾಗೂ ವಿದ್ಯಾಥಿ೯ಗಳು ಸಾಮಾಜಿಕ ಅಂತರವನ್ನು ಪಾಲನೆಮಾಡಿ ಭಾಗವಹಿಸಿದರು.

 
 
 
 
 
 
 
 
 
 
 

Leave a Reply