ಸಾಹೇಬರಕಟ್ಟೆ-ಯಡ್ತಾಡಿ : ಸಮಾಜ ಸೇವಕ ರವಿ ಕಟಪಾಡಿಗೆ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಪ್ರದಾನ

ಕೋಟ: ಯುವಕ ಮಂಡಲದ ಮುಖ್ಯ ಧ್ಯೇಯ ಸಮಾಜಮುಖಿ ಚಿಂತನೆಯಾಗಿರಬೇಕು, ಸಂಘಟಣೆಯ ಮೂಲಕ ಎಷ್ಟು ಸಾಧ್ಯವೋ ಅಷ್ಟು ಸಮಾಜಕ್ಕೆ ಒಳ್ಳೆಯ ಕೆಲಸಗಳಿಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು, ಕಳೆದ ಹಲವಾರು ವರ್ಷಗಳ ಶ್ರೀವಿನಾಯಕ ಯುವಕ ಮಂಡಲದ ಚಟುವಟಿಕೆ ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಅವರು ಹೇಳಿದರು.

ಶ್ರೀ ವಿನಾಯಕ ಯುವಕ ಮಂಡಲ ಸಾಹೇಬರಕಟ್ಟೆ-ಯಡ್ತಾಡಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ೧೧ ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಹಾಗೂ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ರವಿ ಕಟಪಾಡಿ ಮಾತನಾಡಿ ಸನ್ಮಾನ , ಪ್ರಶಸ್ತಿಗಳಿಂದ ಜವಬ್ದಾರಿ ಹೆಚ್ಚುತ್ತದೆ, ಅಲ್ಲದೇ ಇಂತಹ ಸನ್ಮಾನಗಳನ್ನು ನೋಡಿ ಒಂದಿಷ್ಟು ಸಂಘಟನೆ, ವ್ಯಕ್ತಿಗಳು ವೇಷ ಧರಿಸಿ ಅಶಕ್ತರ ನೆರವಾದರೆ ಸನ್ಮಾನದ ಸಾರ್ಥಕತೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ದೇವಾಡಿಗ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಧಾರ್ಮಿಕ ಮುಖಂಡ ಪ್ರಸಾದ್ ಕಾಂಚನ್, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಉದ್ಯಮಿ ಅಶೋಕ್ ಪ್ರಭು, ಗಣೇಶೋತ್ಸವ ಸಮಿತಿ ಜಂಬೂರು ಅಧ್ಯಕ್ಷ ರವೀಂದ್ರನಾಥ್ ಕಿಣಿ, ಮಹಾತ್ಮ ಗಾಂಧಿ ಫ್ರೌಡಶಾಲೆಯ ಮುಖ್ಯೋಪಾಧ್ಯಯ ಸತೀಶ್ ನಾಯ್ಕ, ಉದ್ಯಮಿ ಸಂಕಯ್ಯ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಡ್ತಾಡಿ ವಲಯದ ಸೇವಾ ಪ್ರತಿನಿಧಿ ಆಶಾ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯ ಅಜಿತ್ ಕುಮಾರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ರಾಘವೇಂದ್ರ ಹೆಸ್ಕೂತ್ತುರು ನಿರೂಪಿಸಿದರು.

 
 
 
 
 
 
 
 
 
 
 

Leave a Reply