ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ರೋಟರಿ ಉಡುಪಿ ಮತ್ತು ಚೈಲ್ಡ್ ಲೈನ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದ ಬೋರ್ಡ್ ಹೈಸ್ಕೂಲ್ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಜರಗಲಿರುವುದು.

 

ಮಾನ್ಯ ಅಪರ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಸುವರ್ಣ ಉದ್ಘಾಟಕರಾಗಿ, ಮಾನ್ಯ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ.ಎನ್ ಮತ್ತು ಶ್ರೀಮತಿ ಶರ್ಮಿಳ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರು ಮುಖ್ಯ ಅತಿಥಿ ಗಳಾಗಿ ಬಾಗವಹಿಸಲಿರುವರು.

 

ಇದೇ ಸಂದರ್ಭದಲ್ಲಿ ಸಾಹಸಮಯ ಬೈಕ್ ರೈಡ್ ಸ್ಪೋರ್ಟ್ಸ್ ನಲ್ಲಿ ಸಾದನೆ ಮಾಡಿದ ಮಣಿಪಾಲದ ಕುಮಾರಿ ಅಪೂರ್ವ ಬಿ.ಕೆ. ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಶ್ರೀ ಶಿವಕುಮಾರಯ್ಯ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಶ್ರೀ ಕೆ.ರಂಗನಾಥ , ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ಶ್ರೀ ಕುಮಾರ ನಾಯ್ಕ, ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಬಿ.ಟಿ.ನಾಯ್ಕ, ಬ್ರಹ್ಮಾವರ ಪೋಲೀಸ್ ಠಾಣೆಯ ಸಬ್ಇನ್ಸಪೆಕ್ಟರ್ ಶ್ರೀಮತಿ ಮುಕ್ತಾಬಾಯಿ, ಚೈಲ್ಡ್ ಲೈನ್ , ಉಡುಪಿ ನಿರ್ದೇಶಕ ರೋ.ರಾಮಚಂದ್ರ ಉಪಾಧ್ಯಾಯ, ರೋಟರಿ ಉಡುಪಿ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತ್ ಮುಂತಾದ ವರು ಬಾಗವಹಿಸಲಿರುವರು ಎಂದು ಚೈಲ್ಡ್ ಲೈನ್ ಪ್ರಕಟಣೆ ತಿಳಿಸಿದೆ

 
 
 
 
 
 
 
 
 
 
 

Leave a Reply