ವಿದ್ಯಾವಂತ ಯುವಕೃಷಿಕನಿಂದ ಸಾಧಕರಿಗೆ ಸನ್ಮಾನ

ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಬೆಚ್ಚಳ್ಳಿಯಲ್ಲಿ ರೈತ ದಿನದ ಅಂಗವಾಗಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಬಿ.ಎಡ್. ಪದವಿ ಪಡೆದ ಯುವ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ತನ್ನ ನಿವಾಸದಲ್ಲಿ ಆಯೋಜಿಸಿದ ಸರಳ ಸಮಾರಂಭದಲ್ಲಿ ಮಂಜು ಪೂಜಾರಿ ಬೆಚ್ಚಳ್ಳಿ, ರಾಧಾ ನಾಯ್ಕ್ ಹೊಸಂಗಡಿ, ಲಕ್ಷ್ಮೀ ಪೂಜಾರಿ ಆಜ್ರಿ, ಸಂತೋಷ್ ಶೆಟ್ಟಿ ನಳಾಳು ಯವರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಅಭ್ಯಾಗತರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಸಿದ್ದಾಪುರ ಮಾತನಾಡಿ ವಿದ್ಯಾವಂತರಾದರೂ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಾ ಪರಿಸರದ ಸಾಧಕ ಕೃಷಿಕರನ್ನು ಸನ್ಮಾನಿಸುತ್ತಿರುವ ರಾಜೇಂದ್ರರು ಇತರರಿಗೆ ಮಾದರಿ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ನಾಗೇಶ್, ಹಿರಿಯ ಕೃಷಿಕರಾದ ರಾಮ ಪೂಜಾರಿ, ವಿಠಲ ಶೆಟ್ಟಿ, ರಾಜೇಂದ್ರ ಬೆಚ್ಚಳ್ಳಿ ಉಪಸ್ಥಿತರಿದ್ದರು. ಸುಷ್ಮಾ ಸ್ವಾಗತಿಸಿ, ದಿವ್ಯಾ ವಂದಿಸಿದರು. ಅತಿಥಿಗಳಿಗೆ ನೀಡಲಾದ ಬಿಟ್ರೂಟ್ ನಿಂದ ತಯಾರಿಸಿದ ಗುಲಾಬಿ ವಿಶೇಷವಾಗಿ ಮನಸೆಳೆಯಿತು.

 
 
 
 
 
 
 
 
 
 
 

Leave a Reply