ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.) ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ ಧರ್ಮಪತ್ನಿ.
ತಂದೆಯವರು ಸ್ಥಾಪಿಸಿದ ಕುಂಜಾರು ಗಿರಿಜಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ, ಶಾಲಾ ಸಂಚಾಲಕಿಯಾಗಿ ಸುಧೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಕುರ್ಕಾಲು ಮಹಿಳಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ,ಅಧ್ಯಕ್ಷೆಯಾಗಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ಉಡುಪಿ ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಉಪಾಧ್ಯಕ್ಷೆಯಾಗಿ, ಸ್ತಿ ಸಮಾಜಿಕ ನ್ಯಾಯಕ್ಕಾಗಿ ಹೋರಾಟ, ಗ್ರಾಮದಲ್ಲಿ ರಾಜಿ ಪಂಚಾತಿಕೆಗಳನ್ನು ನ್ಯಾಯಯುತವಾಗಿ ನಡೆಸುತ್ತಿದ್ದರು. ಈ ಎಲ್ಲಾ ನಾಯಕತ್ವದ ಗುಣಗಳು ತಂದೆಯವರಿಂದ ಬಳುವಳಿಯಾಗಿ ಬಂದಿದ್ದು ತಂದೆಯವರ ಸಂಘ ಸಂಸ್ಥೆಗಳನ್ನು, ವಿದ್ಯಾಕೇಂದ್ರಗಳನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದರು.
ಗ್ರಾಮಕ್ಕೆ, ಕುಟುಂಬಕ್ಕೆ ಹಿರಿಯಕ್ಕನಾಗಿ ಜನರ ಪ್ರೀತಿ ಪಾತ್ರರಾಗಿದ್ದರು. ಮಗ ಮಧುಪ್ರಸಾದ್ ಕೊಯಮತ್ತೂರಿನಲ್ಲಿ ಉದ್ಯಮಿಯಾಗಿದ್ದು, ನಾಲ್ಕು ಹೆಣ್ಣು ಮಕ್ಕಳು ಬ್ಯಾಂಕ್ ಅಧಿಕಾರಿಗಳಾಗಿದ್ದಾರೆ. ಅಪಾರ ಹಳೆವಿದ್ಯಾರ್ಥಿ, ಅಭಿಮಾನಿಗಳನ್ನು ಅಗಲಿದ್ದು ಕುಟುಂಬವನ್ನು ಒಗ್ಗಟ್ಟಿನಿಂದ ಮುನ್ನಡೆಸಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು . ಕವಿ ದಿ| ಬಿ. ಎಸ್. ಕುರ್ಕಾಲರ ಸೋದರಿ.