ಹಿಜಾಬ್ ಗದ್ದಲದ ಹಿಂದಿರುವ ರಾಜಕೀಯ ಬಹಿರಂಗ ~ ಶಾಸಕ ರಘುಪತಿ ಭಟ್

ಹಿಜಾಬ್ ಪರವಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗವಾಗಿದೆ.

ಈ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್‌ನಲ್ಲಿ “ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೆ ಹಿಜಾಬ್ ಪ್ರಕರಣದ ಹೈಕೋರ್ಟ್ ವಿಚಾರಣೆ ಮುಂದೂಡಬೇಕು” ಎಂಬ ಅರ್ಜಿ ಹಾಕಲಾಗಿದೆ.

ಹಿಜಾಬ್ ಹೋರಾಟಗಾರರಿಗೆ ಚುನಾವಣೆಯ ಚಿಂತೆಯೇಕೆ?
ಇನ್ನೂ ಮತದಾನದ ಹಕ್ಕು ಪಡೆಯದ ವಿದ್ಯಾರ್ಥಿನಿಯರು ದೂರದ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಂದರೆ ಇವರ ಹಿಂದಿರುವ ಕಾಣದ ‘ಕೈ’ಗಳು ಯಾವುವು?

ಹಿಜಾಬ್ ಬೇಕೆಂದವರು ಈಗ ಹಿಜಾಬ್ ವಿಚಾರಣೆಯನ್ನೇ ಮುಂದೂಡಿ ಎಂದು ಅರ್ಜಿ ಹಾಕಿರುವುದೇಕೆ?

ಉಡುಪಿಗೂ, ಉತ್ತರ ಪ್ರದೇಶದ ಚುನಾವಣೆಗೂ ಏನು ಸಂಬಂಧ?
ಮಧ್ಯಂತರ ಆದೇಶದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದಿದ್ದ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಬಳಿಕ ಉತ್ತರ ಪ್ರದೇಶದ ಚುನಾವಣೆಯ ಕಾರಣ ನೀಡಿ ವಿಚಾರಣೆಯನ್ನೇ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿನಿಯರನ್ನು ಬಳಸಿಕೊಂಡು ರಾಜಕೀಯ ಆಟ ಆಡುತ್ತಿರುವವರನ್ನು ಜನರು ಎಂದಿಗೂ ಕ್ಷಮಿಸಲಾರರು.

 
 
 
 
 
 
 
 
 
 
 

Leave a Reply