ಕಾಶೀ ಹಿಂದೂ ವಿಶ್ವವಿದ್ಯಾಲಯದಲ್ಲಿ ಪುತ್ತಿಗೆ ಶ್ರೀಗಳಿಂದ

ವಾರಣಾಸಿ: ಪರ್ಯಾಯ ಸಂಚಾರದ ನಿಮಿತ್ತ ವಾರಣಾಸಿಗೆ ಆಗಮಿಸಿದ ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರನ್ನು ಇಂದು ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆಯಾದ ಕಾಶೀ ಹಿಂದೂ ವಿಶ್ವವಿದ್ಯಾಲ ಯದ ಮಾಳವೀಯ ಭವನದಲ್ಲಿ ಗೌರವಾದರಗಳಿಂದ ಸ್ವಾಗತಿಸಲಾಯಿತು.

“ಅಂತಾರಾಷ್ಟ್ರೀಯ ಯೋಗ ದಿವಸ”ದ ಹಿನ್ನೆಲೆಯಲ್ಲಿ ಗೀತಾ ಯೋಗದ ಆವಶ್ಯಕತೆಯನ್ನು ಪುತ್ತಿಗೆ ಶ್ರೀಗಳು ವಿವರಿಸಿದರು. ಭಗವದ್ಗೀತಾ ಉಪನ್ಯಾಸವು ನಡೆಯಿತು. ಶ್ರೀಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಗೀತಾ ಲೇಖನ ಯಜ್ಞದ ಮಹತ್ವವನ್ನು ತಿಳಿಸಿದರು.

ವೇದಿಕೆಯಲ್ಲಿ ಮಾಳವೀಯ ಭವನದ ನಿರ್ದೇಶಕರಾದ ಪ್ರೋ.ರಾಜಾರಾಮ್ ಶುಕ್ಲ, ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಪ್ರೋ. ವ್ರಜಭೂಷಣ ಓಝಾ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply