ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ.ತಮ್ಮ ಕುಟುಂಬಕ್ಕೆ ಕೂಡ ಸರಿಯಾದ ಸಮಯ ನೀಡದೆ ರೋಗಿಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಂಡು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಅಪೂವ೯ ವೈದ್ಯ ದಂಪತಿಗಳಲ್ಲಿ ಇವರೂ ಕೂಡ ಸೇರಿದ್ದಾರೆ. ಕುಂದಾಪುರದ ಪ್ರಸಿದ್ಧ ವೈದ್ಯ ದಂಪತಿಯಾಗಿರುವ ಇವರು ಹೆಬ್ಬಾರ್ ಕ್ಲಿನಿಕ್ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಡಾII ಹೆಚ್.ಆರ್ ಹೆಬ್ಬಾರ್ ರವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಸ್ಥಳೀಯ ಸಂಸ್ಥೆಯಲ್ಲಿ ಪೂರೈಸಿ, ಮೈಸೂರು ಮೆಡಿಕಲ್ ಕಾಲೇಜಿನ ಮೂಲಕ ಎಂ.ಬಿ.ಬಿ.ಎಸ್ ನ್ನು ವಿ.ವಿಯಲ್ಲಿ ಅತೀ ಹೆಚ್ಚಿನ ಅಂಕ ಗಳನ್ನು ಪಡೆಯುವ ಮೂಲಕ ಪೂರೈಸಿರುತ್ತಾರೆ. ನಂತರ ಗುಲ್ಬಗ೯ ವಿ.ವಿಯಲ್ಲಿ ಎಂ.ಡಿ (ಮಕ್ಕಳ ರೋಗ ಶಾಸ್ತ್ರ) ವನ್ನು ಪೂರೈಸಿದ ಮೊದಲ ವ್ಯಕ್ತಿಯಾಗಿ ಮೂಡಿ ಬಂದಿರುವುದು ಅಭಿನಂದನೀಯ ವಿಷಯ. ನಂತರ ಸಕಾ೯ರದ ಸೇವೆಯಲ್ಲಿ 7 ವಷ೯ಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಕಳೆದ 38 ವಷ೯ಗಳಿ೦ದ ನಿರಂತರ ಕುಂದಾಪುರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಡಾII ಪುಷ್ಪ ಗಂಧಿನಿ ಇವರು ಗುಲ್ಬಗ೯ ವಿವಿಯಿಂದ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದು, ಡಿಜಿಒ ಪದವಿಯನ್ನು ವಿಮ್ಸ್ ಬಳ್ಳಾರಿಯಿಂದ ಮುಗಿಸಿದ್ದಾರೆ. ಇವರು ವಿ.ವಿಯ ಟೆನ್ನಿಕೊಟ್ ಮತ್ತು ತ್ರೋಬಾಲ್ ಚಾಂಪಿಯನ್ ಆಗಿ ಮೂಡಿ ಬಂದಿರುವುದು ಅವರ ದೊಡ್ಡ ಕ್ರೀಡಾ ಸಾಧನೆಯಾಗಿದೆ. ಪ್ರವಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಈವರೆಗೆ 20 ದೇಶಗಳನ್ನು ಸಂದಶಿ೯ಸಿ ಅದರ ಕುರಿತು ಲೇಖನಗಳನ್ನು ಕೂಡ ಬರೆದಿದ್ದಾರೆ. ರಂಗ ಚಟುವಟಿಕೆಗಳಲ್ಲಿ ಕೂಡ ಆಸಕ್ತಿ ಬೆಳೆಸಿಕೊಂಡಿರುವುದು ಸಂತೋಷದ ವಿಷಯ. ವಿವಿಧ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿರುತ್ತಾರೆ. 2 ಪುಸ್ತಕಗಳು ಇವರ ಲೇಖನಿಯಿಂದ ಮೂಡಿ ಬಂದಿವೆ. ಡಾII ಅಲ್ಕಾ ಮತ್ತು ಡಾ| ಮಾಳವಿಕಾ ಹೆಬ್ಬಾರ್ ದಂಪತಿಗಳ ಮುದ್ದು ಮಕ್ಕಳು .
ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇವರು ಕುಂದಾಪುರದ ಅಪೂವ೯ ವೈದ್ಯ ದಂಪತಿಗಳು. ವೈದ್ಯ ದಂಪತಿಗಳ ಸೇವೆ ಹೀಗೆಯೇ ಮುಂದುವರೆಯಲಿ ಎಂಬ ಆಶಯದೊಂದಿಗೆ, ಇವರ ಈ ಸೇವೆಗೆ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಮಧ್ಯಾಹ್ನ 3 ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2023ನ್ನು ನೀಡಿ ಗೌರವಿಸಲಿದ್ದಾರೆ
~ ರಾಘವೇಂದ್ರ ಪ್ರಭು ಕರ್ವಾಲು