” ICAI ಸಹಭಾಗಿತ್ವದಲ್ಲಿ ಯು.ಪಿ.ಎಂ.ಸಿ ಯೋಗದಿನಾಚರಣೆ”

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಮತ್ತು ICAI ಉಡುಪಿ ಶಾಖೆಯ ಸಹಭಾಗಿತ್ವದಲ್ಲಿ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜೂನ್ 21 ರಂದು ಯೋಗ ದಿನಾಚರಣೆ ಜರಗಿತು. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಯೋಗ ತರಬೇತುದಾರರಾದ ಶ್ರೀಮತಿ ಅಮಿತಾ ಭಟ್ ಉಡುಪಿ ಮತ್ತು ಅವರ ವಿದ್ಯಾರ್ಥಿಗಳಿಂದ ದೈನಂದಿನ ಅಭ್ಯಾಸಗಳಾದ ಪ್ರಾಣಾಯಾಮ ಮತ್ತು ಧ್ಯಾನದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವವನ್ನು ವಿವರಿಸಿದರು.

ಉಡುಪಿ ICAI ಶಾಖೆಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಸಿಕಾಸ ಮುಖ್ಯಸ್ಥರಾದ ಸಿಎ. ಲೋಕೇಶ್ ಶೆಟ್ಟಿ, ಖಜಾಂಚಿ ಸಿಎ. ರಾಘವೇಂದ್ರ ಮೊಗೆರಾಯ, ಸಹ ಸದಸ್ಯರಾದ ಸಿಎ. ಅಶ್ವಥ್ ಜೆ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸಿಎ.ಗಣೇಶ್ ವೈ, ಸಿಎ. ರೇಖಾ ದೇವಾನಂದ್, ಸಿಎ. ಪ್ರದೀಪ್ ಜೋಗಿ ಉಪಸ್ಥಿತರಿದ್ದರು. ICAI ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ ಮಹೀಂದ್ರ ಶೆಣೈ ಪಿ ಸ್ವಾಗತಿಸಿದರು, ಕಾರ್ಯದರ್ಶಿ ಸಿಎ. ಅರ್ಚನಾ ಆರ್ ಮಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply