ಸಮಾಜ ಸೇವೆ ಇತರರಿಗೆ ಪ್ರೇರಣೆಯಾಗಲಿ- ಪುನರೂರು.

ಪುನರೂರು ಪ್ರತಿಷ್ಠಾನ(ರಿ)ನ ಆಶ್ರಯದಲ್ಲಿ ಮಾಡುವ ಪ್ರತಿಯೊಂದು ಸಾಮಾಜ ಸೇವೆಗಳು ಇತರರಿಗೆ ಪ್ರೇರಣೆಯಾಗಿ ಹೆಚ್ಚು ಜನ ಸೇವಾಕಾರ್ಯಗಳಲ್ಲಿ ತೊಡಗುವಂತಾಗಲಿ ಎಂದು ಪುನರೂರು ಪ್ರತಿಷ್ಠಾನ (ರಿ)ದ ಗೌರವ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನ(ರಿ)ದ ಅಂಗಸಂಸ್ಥೆಯಾದ ಜನವಿಕಾಸ ಸಮಿತಿ ಮೂಲ್ಕಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಈ ಸಂದರ್ಭ ಜನವಿಕಾಸ ಸಮಿತಿ ನೂತನ ಅಧ್ಯಕ್ಷರಾದ ದಾಮೋದರ ಶೆಟ್ಟಿ ಕೊಡೆತ್ತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕರ ಕೆರೆಕಾಡು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ಪುನರೂರು ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಪುನರೂರು ಪ್ರತಿಷ್ಠಾನ (ರಿ ಇದರ ಪ್ರಧಾನ ಕ್ರಾಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಮೂಲ್ಕಿಯ ಉಪಾಧ್ಯಕ್ಷರಾದ ಶೋಭಾ ರಾವ್, ಕಾರ್ಯದರ್ಶಿಗಳಾದ ಪಿ. ಎಸ್. ಸುರೇಶ್ ರಾವ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೀತಾ ಶೆಟ್ಟಿ, ಭಾಗ್ಯ ರಾಜೇಶ್, ಜೀವನ್ ಶೆಟ್ಟಿ, ಪ್ರಾಣೇಶ್ ಭಟ್ ದೇಂದಡ್ಕ ಉಪಸ್ಥಿತರಿದ್ದರು.
ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply