ಚುನಾವಣೆಯಲ್ಲಿ 1,500 ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳು ಯಾರು ಗೊತ್ತೇ.?

ಬೆಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡ ಅಭ್ಯರ್ಥಿ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ. ಅವರು ಎಷ್ಟು ಮತಗಳ ಅಂತರದಿಂದ ಸೋತರೆಂದು ಗೊತ್ತೆ..? ಅಭ್ಯರ್ಥಿಗಳು ಒಂದು ಸಾವಿರ ಮತಗಳ ಅಂತರದಿಂದ ಹಿಡಿದು ಹದಿನಾರು ಮತಗಳ ಅಂತದಲ್ಲಿಯೂ ವಿಜಯಶಾಲಿಗಳಾಗಿದ್ದಾರೆ. ಗೆದ್ದವರು ನಿಟ್ಟುಸಿರುಬಿಟ್ಟರೆ ಸೋತವರು ನಿರಾಸೆಯಿಂದ ಕಣ್ಣೀರು ಹಾಕಿದ್ದಾರೆ.

ಅತ್ಯಂತ ಕಡಿಮೆ ಅಂತದಲ್ಲಿ ಗೆದ್ದ ಕ್ಷೇತ್ರಗಳು :

1) ಹಡಗಲಿ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ 1444 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ್ ಸೋಲುಂಡಿದ್ದಾರೆ.
2) ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ : ಶೈಲೇಂದ್ರ ಬೆಲ್ದಾಳೆ ಬಿಜೆಪಿ ಅಭ್ಯರ್ಥಿಯು 1,263 ಮತಗಳಿಂದ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಖೇಣಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
3) ಜಗಳೂರು ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್‌ ಅಭ್ಯರ್ಥಿ ಬಿ.ದೇವೇಂದ್ರಪ್ಪ ಕೇವಲ 874 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿ ಎಸ್.ವಿ.ರಾಮಚಂದ್ರ ಸೋತಿದ್ದಾರೆ.
4) ಚಿಂಚೋಳಿ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಅವಿನಾಶ್ ಉಮೇಶ್ ಜಾಧವ್ 858 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ವಿ. ರಾಥೋಡ್ ಸೋತಿದ್ದಾರೆ.
5) ಮೂಡಿಗೆರೆ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್‌ ಅಭ್ಯರ್ಥಿ ನಯನಾ ಮೋಟಮ್ಮ 722 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇದೇ ಕ್ಷೇತ್ರದ ಬಿಜೆಪಿಯಿಂದ ಸ್ಪರ್ಧಿಸಿದ್ದ ದೀಪಕ ದೊಡ್ಡಯ್ಯ ಸೋತಿದ್ದಾರೆ.
6) ಕುಮಟಾ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರು ಕೇವಲ 676 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಸೋತಿದ್ದಾರೆ. ಮೊದಲೆಲ್ಲ ಮುನ್ನಡೆಯಲ್ಲಿದ್ದ ಸೂರಜ ನಾಯ್ಕ ಸೋನಿ ಅವರು ಕೊನೆಯ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು.
7) ಮಾಲೂರು ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್‌ ಅಭ್ಯರ್ಥಿಯಾದ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಅದೃಷ್ಟ ನಂಜೇಗೌಡ ಅವರ ಕೈ ಹಿಡಿದಿದೆ.
8) ಶೃಂಗೇರಿ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು 201 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ ವಿರುದ್ಧ ಜಯಗಳಿಸಿದ್ದಾರೆ. ಮತ ಎಣೀಕೆ ಸಂದರ್ಭದಲ್ಲಿ ಕೊನೆಯ ಸುತ್ತಿನ ವರೆಗೂ ವಿಜಯ ಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆಂದು ಗೊತ್ತಿರಲಿಲ್ಲ.
9) ಬೆಂಗಳೂರು ಗಾಂಧಿ ನಗರ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್ ಗುಂಡು ರಾವ್ 105 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಎ.ಆರ್. ಅವರಿಗೆ ಅದೃಷ್ಟ ಲಕ್ಷ್ಮೀ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದಾಳೆ.
10) ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್‌ ಸೌಮ್ಯಾ ರೆಡ್ಡಿ ಅವರು ಕೇವಲ 16 ಮತಗಳ ಅಂತದಲ್ಲಿ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಗೆಲುವಿನ ನಗೆ ಬೀರಿದ್ದಾರೆ. ಮೊದಲು ಸೌಮ್ಯ ರೆಡ್ಡಿ ಅವರು 294 ಮತಗಳ ಅಂತರದಿಂದ ಮುಂದಿದ್ದರು.
ಆದರೆ ಅಂಚೆ ಮತಗಳ ಮರು ಎಣಿಕೆ ವೇಳೆ ಬಿಜೆಪಿಯ ಸಿ ಕೆ ರಾಮಮೂರ್ತಿ ಅವರು 16 ಮತಗಳ ಮುನ್ನಡೆ ಪಡೆದರು. ಸೌಮ್ಯ ರೆಡ್ಡಿ ಅವರು ಗೆದ್ದು ಸೋತಿದ್ದಾರೆ ಹಾಗೂ ರಾಮಮೂರ್ತಿ ಅವರು ಸೋತು ಗೆದ್ದಿದ್ದಾರೆ.

 
 
 
 
 
 
 
 
 
 
 

Leave a Reply