ಮುನಿರತ್ನ ಅವರನ್ನು ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ~ಸಂಸದೆ ಶೋಭಾ ಕರಂದ್ಲಾಜೆ 

ಬೆಂಗಳೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ದುಡ್ಡು ಹಾಗೂ ಶಕ್ತಿ ಬಳಸಿ ಅಕ್ರಮವಾಗಿ ಜಯಗಳಿಸಲು ಕಾಂಗ್ರೆಸ್ ಷಡ್ಯಂತ್ರ ರಚಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಆದರೆ ಜನರಿಗೆ ಅವರ ದಬ್ಬಾಳಿಕೆ, ಒತ್ತಡ ಹಾಗೂ ನಡೆಸುತ್ತಿರುವ ಅಕ್ರಮಗಳ ಬಗ್ಗೆ ತಿಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ.ನಮ್ಮ ಅಭ್ಯರ್ಥಿ, ಜನನಾಯಕ ಶ್ರೀ ಮುನಿರತ್ನ ಅವರನ್ನು ಸೋಲಿಸಲು ನಡೆಸಿರುವ ಕುಂತಂತ್ರದ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ.

ಇನ್ನು ಚುನಾವಣೆ ಮುಗಿಯುವವರೆಗೂ ಸಂಸದ ಡಿ ಕೆ ಸುರೇಶ್ ಆರ್ ಆರ್ ನಗರದಲ್ಲಿ ಇರಬಾರದು. ಅವರ ಅಕ್ರಮ-ದಬ್ಬಾಳಿ ಕೆಗಳು ಚುನಾವಣೆಯ ಮೇಲೆ ಪ್ರಭಾವ ಬೀರಬಾರದು ಎಂದು ಬಿಜೆಪಿ ಹೇಳಿದೆ. ಬೆಂಗಳೂರು ನಗರ ಬಿಜೆಪಿ ಕಾರ್ಯಾಲಯ ದೇಶಪಾಂಡೆ ಭವನದಲ್ಲಿ ಇಂದು ಬೆಳಗ್ಗೆ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಲಾಯಿತು.

 
 
 
 
 
 
 
 
 
 
 

Leave a Reply