ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿ.ಡಿ 5 ಕೋಟಿಗೆ ಡೀಲ್ ..?

ಬೆಂಗಳೂರು:  ರಮೇಶ್‌ ಜಾರಕಿಹೊಳಿ ಸಿಡಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಿಡಿ ವಿಚಾರವಾಗಿ ಮಾತನಾಡುವವನನ್ನ ಬಂಧಿಸಲಿ. ಸಂತ್ರಸ್ತೆ ಬಗ್ಗೆ ಮಾತು ಆ ನಂತರ ಇರಲಿ ಎಂದು  ಮೈಸೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಡೀ ಪ್ರಕರಣ ಐದು ಕೋಟಿಗೆ ಡೀಲ್ ಆಗಿದೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಮೂರು ತಿಂಗಳ ಹಿಂದೆಯೇ ಸಿಡಿ ಮುಂದಿಟ್ಟು ವ್ಯವಹಾರ ನಡೆಸಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ. ಒಬ್ಬನಲ್ಲ ತಂಡ ಕಟ್ಟಿಕೊಂಡು ದುಡ್ಡು ಮಾಡಲು ನಿಂತಿದ್ದಾರೆ ಎಂದರು. 

ದೂರುದಾರ ದಿನೇಶ್ ಕಲ್ಲಳ್ಳಿ ವಿರುದ್ದ ಕಿಡಿ ಕಾರಿದ ಕುಮಾರಸ್ವಾಮಿ,  ಇನ್ನೂ ನಾಲ್ಕು, 19 ಸಿಡಿ ಇವೆ ಅನ್ನೋದು ಬ್ಲಾಕ್‌ಮೇಲ್‌. ಯಾರದ್ದೇ ಖಾಸಗಿ ಬದುಕನ್ನ ಈ ರೀತಿ ತೋರಿಸೋದು ತಪ್ಪು. ಅಷ್ಟು ಸಿಡಿ ಇವೆ ಅಂತ ಹೇಳಬೇಕಾದ್ರೆ ಈತನೇ ಚಿತ್ರೀಕರಣ ಮಾಡಿಸಿದ್ದಾನೆಯೇ,  ಮೊದಲು ಬ್ಲಾಕ್‌ಮೇಲ್‌ ಮಾಡೋರನ್ನ ಬಂಧಿಸಿ ಏರೋಪ್ಲೇನ್ ಹತ್ತಿಸಿದ್ರೆ ಸತ್ಯ ಹೊರ ಬರುತ್ತೆ ಎಂದು  ಅವರು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಅವರಿಬ್ಬರೇ ಸೇರಿ ವಿಡಿಯೋ ಮಾಡಿಕೊಂಡಿರಬಹುದಲ್ಲವೇ, ಅವರಿಬ್ಬರಲ್ಲೇ ಯಾರಾದರೂ ಒಬ್ಬರು ಕೊಟ್ಟಿರಬೇಕಲ್ವೆ. ಈತನ ಬಳಿ ಹೇಗೆ ಬಂತು, ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು.  ಸಮಾಜದಲ್ಲಿ ಹೇಸಿಗೆ ಹುಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಕರಣ ಐದು ಕೋಟಿ ಡೀಲ್‌ ಆಗಿರುವ ಬಗ್ಗೆ ಕುಮಾರಸ್ವಾಮಿಯವರಿಗೆ ಬಂದಿರುವ ಮಾಹಿತಿ ಯನ್ನು ಅವರು ತನಿಖಾ ತಂಡಕ್ಕೆ ನೀಡುವರೇ  ಸದ್ಯಕ್ಕೆ ಕುತೂಹಲ ಕೆರಳಿಸಿರುವ ವಿಚಾರ.

 
 
 
 
 
 
 
 
 
 
 

Leave a Reply