ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಶಿಲಾ ದೇಹಲಿ (ಹೊಸ್ತಿಲು) ಸ್ಥಾಪನೆ

ಉಡುಪಿಯ ಕುಂಜಿಬೆಟ್ಟಿನ ಅನಂತಾಸನ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋ ದ್ಧಾರದ ಅಂಗವಾಗಿ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಶಿಲಾ ದೇಹಲಿ (ಹೊಸ್ತಿಲು) ಸ್ಥಾಪನೆ  ನಿರ್ಮಿಸಲು ಉದ್ದೇಶಿಸಿರುವ ಶಿಲಾಮಯ ಗರ್ಭಗೃಹದ ಧಾರ್ಮಿಕ ವಿಧಿ ವಿಧಾನಗಳು ಪ್ರಯುಕ್ತ ವೈದಿಕರಾದ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಶೀಲಾ ಹೊಸ್ತಿಲು ಸ್ಥಾಪನೆ ನಡೆಯಿತು.ಆಡಳಿತ ಮೊಕ್ತೇಸರರಾದ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಊರ ಹತ್ತು ಸಮಸ್ತರ ಭಕ್ತರ ಜೀರ್ಣೋದ್ಧಾರ ಸಮಿತಿಯ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.  ಈ ಸಂದರ್ಭದಲ್ಲಿ ಸುಮಂಗಲಿಯರು ಹೊಸ್ತಿಲು ಪೂಜೆಯನ್ನು ನಡೆಸಿದರು.

ನಾಗರಾಜ ಆಚಾರ್ಯ​, ​ ಜೀರ್ಣೋದ್ಧಾರ ಸಮಿತಿಯಕಾರ್ಯಾಧ್ಯಕ್ಷರುಗಳಾದ ಮಲ್ಪೆ ವಿಶ್ವನಾಥ್ ಭಟ್, ಎಸ್ ನಾರಾಯಣ್ ಮಡಿ, ​ಇಂಜಿನೀಯರ್ ನಾಗರಾಜ್ ಆಚಾರ್ಯ, ​ಪ್ರಧಾನ ಕಾರ್ಯದರ್ಶಿ ಬಿ.ವಿಜಯರಾಘವ ರಾವ್, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಜತೆ ಕೋಶಾಧಿಕಾರಿ ಆರ್ ವಿಷ್ಣುಮೂರ್ತಿ ಉಪಾಧ್ಯಾಯ,​ ​ಸ೦ತೋಷ್ ಪಿ ಶೆಟ್ಟಿ ತೆ೦ಕರಗುತ್ತು, ​ಸುಮಿತ್ರ ಆರ್ ಭಟ್,  ​ಜೀರ್ಣೋದ್ಧಾರ ಸಮಿತಿಯ ಸದಸ್ಯರು ಮತ್ತು ಮಹಿಳಾ ಭಜನಾ ಮ೦ಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.  

 
 
 
 
 
 
 
 
 
 
 

Leave a Reply