ಬಸ್ಸನ್ನೇ ಹೈಜಾಕ್ ಮಾಡಿದ ಪೋಲಿಸಪ್ಪ

ಚೆನ್ನೈ: ಕಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್-​ ಸಿಟ್ಟಿಗೆದ್ದ ಕಾನ್ಸ್​ಟೆಬಲ್ ಮಾಡಿದ್ದೇನು ಗೊತ್ತಾ?  ಕದಿರೇಶನ್ ಥೇಣಿ ಜಿಲ್ಲೆಯ ಅಂಟಿಪಟ್ಟಿ ಬಳಿಯ ಡಿ.ಪೊಮ್ಮಿನಾಯಕನಪಟ್ಟಿಯವರು. ಇವರು ಥೇಣಿ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. 
ಕುಟುಂಬ ಸಮೇತ ಕಾರಿನಲ್ಲಿ ತೇಣಿಗೆ ತೆರಳಿದ್ದರು. ಆ ಸಮಯದಲ್ಲಿ ಆಂಡಿಪಟ್ಟಿ ಬಳಿ ಟಿ.ಸುಪ್ಪುಲಾಪುರಂ ವಿಭಾಗದಲ್ಲಿ ಮಧುರೈ ಕಡೆಯಿಂದ ಕಂಬಂ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಕದಿರೇಶನ್ ಅವರ ಕಾರಿನ ಹಿಂಬದಿಗೆ ಅನಿರೀಕ್ಷಿತವಾಗಿ ಡಿಕ್ಕಿ ಹೊಡೆದು ಕಾರಿನ ಹಿಂಬದಿ ಭಾಗ ಜಖಂಗೊಂಡಿತ್ತು. ಸಿಟ್ಟಿಗೆದ್ದ ಕಾನ್ಸ್​ಟೆಬಲ್ ಮಾಡಿದ್ದೇನು ಗೊತ್ತಾ? ಕಾರಿಂದ ಇಳಿದು ಬಂದು ಬಸ್ಸನ್ನೇ ಹೈಜಾಕ್ ಮಾಡಿದ್ದಾರೆ.

ಘಟನೆಯಿಂದ ಕೋಪಗೊಂಡ ಶಸ್ತ್ರಸಜ್ಜಿತ ಕಾನ್‌ಸ್ಟೆಬಲ್ ಕದಿರೇಶನ್ ಕಾರಿನಿಂದ ಕೆಳಗಿಳಿದು ಬಸ್ ಚಾಲಕ ಮತ್ತು ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದರು. ಸ್ವಲ್ಪ ಸಮಯದ ನಂತರ, ಅವರು ತನ್ನ ಕೆಲವು ಗ್ರಾಮಸ್ಥರೊಂದಿಗೆ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದರು. 

ನಂತರ, ಪ್ರಯಾಣಿಕರನ್ನು ಬಸ್ಸಿನಲ್ಲಿ ಇಳಿಸಿ ತನ್ನ ಊರಿಗೆ ಬಸ್ ತೆಗೆದುಕೊಂಡು ಹೋಗಿದ್ದಾರೆ. ಖಾಸಗಿ ಬಸ್ ಚಾಲಕ ಅಕ್ಕೂರರಾಜ ಆಂಡಿಪಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
 
 
 
 
 
 
 
 
 
 

Leave a Reply