ಸ್ಕೂಟರ್‌ಗೆ ವಾಹನ ಡಿಕ್ಕಿ ಸ್ಕೂಟರ್ ಸವಾರೆಗೆ ಗಾಯ

ಪೆರಂಪಳ್ಳಿ: ರಸ್ತೆ ಕ್ರಾಸ್ ಮಾಡುತ್ತಿದ್ದ ಸ್ಕೂಟರ್‌ಗೆ ಹಾಲಿನ ವಾಹನ ಡಿಕ್ಕಿ‌ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಗಾಯಗೊಂಡ ಘಟನೆ ಮಣಿಪಾಲ ಪೆರಂಪಳ್ಳಿ ಸಾಯಿರಾಧಾ ಗ್ರೀನ್ ವ್ಯಾಲ್ಯೂ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. 

ಗಾಯಾಳುವು ಸಾಯಿರಾಧಾ ಗ್ರೀನ್ ವ್ಯಾಲ್ಯೂ ನಿವಾಸಿಯಾಗಿದ್ದು, ಇವರು ಸ್ಕೂಟರ್‌ನಲ್ಲಿ ಗ್ರೀನ್ ವ್ಯಾಲ್ಯೂನಿಂದ ಪೆರಂಪಳ್ಳಿ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದರು. ಈ ವೇಳೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದ್ದ ಖಾಸಗಿ ಬಸ್‌ನ ಹಿಂಬದಿಯಿಂದ ಬರುತ್ತಿದ್ದ ಹಾಲಿನ ವಾಹನವನ್ನು ಗಮನಿಸದೆ ರಸ್ತೆ ಕ್ರಾಸ್ ಮಾಡಿದ್ದಾರೆ‌.

ವೇಗವಾಗಿ ಬರುತ್ತಿದ್ದ ಹಾಲಿನ ವಾಹನ ಸ್ಕೂಟರ್‌ಗೆ ಡಿಕ್ಕಿ‌ ಹೊಡೆದ ಪರಿಣಾಮ ಸವಾರೆ ಗಂಭೀರ ಗಾಯಗೊಂಡಿದ್ದಾರೆ.

 
 
 
 
 
 
 
 
 
 
 

Leave a Reply