ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ- ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಹೋಟೆಲ್ ಉಡುಪಿ ರೆಸಿಡೆನ್ಸಿಯಲ್ಲಿ ಸಂಘದ ಅಧ್ಯಕ್ಷ ಕೆ. ರಘುಪತಿ ಭಟ್ ರವರ ಅಧ್ಯಕ್ಷತೆ ಯಲ್ಲಿ ಜರುಗಿತು. ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಉಪಾಧ್ಯಕ ರಮೇಶ್ ಶೆಟ್ಟಿ ಕಾರ್ಕಳ ಹಾಗೂ ನಿರ್ದೇಶಕ ರಾಮಚಂದ್ರ ಸನಿಲ್, ರಮೇಶ್ ಶೆಟ್ಟಿ ಜಾರ್ಕಳ, ಶಿವಪ್ರಸಾದ್ ಶೆಟ್ಟಿ, ಗಣೇಶ್ ಕುಮಾರ್, ರಾಧಿಕಾ ಕಾಮತ್, ಶಾಂಭವಿ ಕೆ.ಉಪಸ್ಥಿತರಿದ್ದರು.
ಸಂಘದ ವತಿಯಿಂದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಶ್ರೀಮತಿ ರಂಜಿತಾ ಪ್ರವೀಣ್ರವರು ವರದಿ ಮಂಡಿಸಿದರು. ಸಂಘದ ನಿರ್ದೇಶಕ ಸ್ನೇಹಪ್ರಭ ಕಮಲಾಕ್ಷ ಸ್ವಾಗತಿಸಿದರು. ಕೆ. ರಘುಪತಿ ಭಟ್ ಪ್ರಾಸ್ತಾವಿಸಿದರು. ನಿರ್ದೇಶಕ ಶ್ರೀಶ ಕೊಡವೂರು ಧನ್ಯವಾದ ವಿತ್ತರು.