ಆಸ್ಕರ್ ಅಣ್ಣ ಚೇತರಿಕೆಗೆ‌ ಶ್ರೀಗುರುರಾಯರಲ್ಲಿ ಪ್ರಾರ್ಥನೆ

ಮಂಗಳೂರಿನ ಆಸ್ಪತ್ರೆಯೊಂದರ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯನಾಯಕರಾದ ಸನ್ಮಾನ್ಯ  ಶ್ರೀಆಸ್ಕರ್ ಫರ್ನಾಂಡಿಸ್ ಅವರು ಶೀಘ್ರ ಗುಣಮುಖ ರಾಗಲೆಂದು ರಾಜ್ಯ ಯುವ ಕಾಂಗ್ರೆಸ್ಸಿನ ಮಾಜಿ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ರವರ ಆಪ್ತ ಜಯಶೆಟ್ಟಿ ಬನ್ನಂಜೆಯವರ ನೇತೃತ್ವದಲ್ಲಿ ಉಡುಪಿ ರಥಬೀದಿಯ  ಶ್ರೀರಾಘವೇಂದ್ರ ಮಠದಲ್ಲಿ ಗುರುವಾರದಂದು ಪ್ರಾರ್ಥನೆ ಮಾಡಿ ಸೇವೆಸಲ್ಲಿಸಲಾಯಿತು.
  
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯುವನಾಯಕ ಅಮೃತ ಶೆಣೈ, ಬ್ರಹ್ಮಾವರ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ಶೆಟ್ಟಿ ಕೀಳಂಜೆ,  ಕಾಂಗ್ರೆಸ್ ಪಕ್ಷದ ಎಸ್ಸಿ  ಘಟಕದ ರಾಜ್ಯ ಸಂಚಾಲಕ ಬಿ, ಕೆ ರಾಜ್ ಕೆಮ್ಮಣ್ಣು , ಸದಾನಂದ ಪೂಜಾರಿ ಪರ್ಕಳ
ವಾಲ್ಟರ್ ಡಿಸೋಜ ಕೊಳಲಗಿರಿ, ಉಡುಪಿ ಮಾಜಿ ನಗರಸಭಾ ಸದಸ್ಯ ಸುರೇಶ್ ಶೇರಿಗಾರ್ ಬೈಲಕೆರೆ, ಎ ಜೆ ಕಾಡು ಬೆಟ್ಟು ರವರ ಸುಪುತ್ರ ಜೊತೆಗಿದ್ದು,  ಶ್ರೀರಾಘವೇಂದ್ರ ಮಠದ ಉಸ್ತುವಾರಿ ಜಯತೀರ್ಥರವರು ಜೊತೆಗಿದ್ದು  ಶೀಘ್ರ ಗುಣಮುಖರಾಗ ಲೆಂದು ಶ್ರೀಗುರು ಸಾರ್ವಭೌಮ ಮಂತ್ರಾಲಯದಿಂದ  ಪ್ರಸಾದ ರೂಪವಾದ ವಸ್ತ್ರವನ್ನು ಹಾಗೂ ಮತ್ತು ಮಂತ್ರಾಕ್ಷತೆ ನೀಡಿದರು.  

ಬಳಿಕ ರಾಘವೇಂದ್ರ ಮಠದ ಗೋವುಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಬಾಳೆಹಣ್ಣು ನೀಡಿ. ಆಸ್ಕರ್ ಫರ್ನಾಂಡಿಸ್ ಗುಣಮುಖರಾಗಲೆಂದು ಪ್ರಾರ್ಥಿಸಿದರು
 
 
 
 
 
 
 
 
 
 
 

Leave a Reply