ಹಿಜಾಬ್ ಧಾರಿಣಿ ವಿಧ್ಯಾರ್ಥಿನಿಗಳನ್ನು ಕೂಡಲೇ ಮಂಪರು ಪರೀಕ್ಷೇಗೆ ಒಳಪಡಿಸಿ, ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಆಕ್ರೋಶ

ಕಳೆದ 36 ವರ್ಷಗಳಿಂದ ಹಿಜಾಬ್ ಇಲ್ಲದೆ ಅದೇಷ್ಟೋ ಮುಸ್ಲಿಂ ಸಹೋದರಿಯರು ಕಲಿತ ಕಾಲೇಜಿನಲ್ಲಿ ಏಕಾಏಕಿಯಾಗಿ ಕಳೆದ ಡಿ 31ರಂದು ಹಿಜಾಬ್ ವಿಷಯದಲ್ಲಿ ಗಲಬೆ ಸ್ರಷ್ಟಿಸಿದ ವಿಧ್ಯಾರ್ಥಿನಿಗಳನ್ನು ಕೂಡಲೇ ಮಂಪರು ಪರೀಕ್ಷೆಗೆ ಓಳವಡಿಸಿ ಕೂಡಲೇ ಇದರ ಹಿಂದಿರುವ ಭಯೋತ್ಪಾದಕ ಸಂಘಟನೆಗಳ ಕೈವಾಡದ ಶಂಕೆಯನ್ನು ಕೂಡಲೇ ಬಹಿರಂಗ ಪಡಿಸಬೇಕೆಂದು ಸರಕಾರಕ್ಕೆ ಶ್ರೀ ರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಆಗ್ರಹಿಸಿದ್ದಾರೆ.
ಶೈಕ್ಷಣಿಕ ಪರೀಕ್ಷಾ ಸಮಯದಲ್ಲಿ ಮಕ್ಕಳಲ್ಲಿ ಗೊಂದಲ ಸ್ರಷ್ಟಿಸುವುದು ಸರಿಯಲ್ಲ, ಹಾಗೂ ಇದು ಮಕ್ಕಳ ಭವಿಷ್ಯದ ಪರೀಕ್ಷೆ ಆಗಿರುವುದರಿಂದ, ಹಿಜಾಬ್ ವಿಧ್ಯಾರ್ಥಿನಿಗಳು ಹೈಕೋರ್ಟ್ ಆದೇಶದಂತೆ ಪರೀಕ್ಷೆ ಬರೆಯಿರಿ ಇಲ್ಲವೇ ಮನೆಯಲ್ಲಿರಿ. ಮತೀಯವಾದಿ ಸಂಘಟನೆಯಿಂದ ಪ್ರೇರೇಪಿತವಾದ ತಾವುಗಳು ವಿಧ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಮಾಡಬೇಡಿ, ಏಂದು ಜಯರಾಂ ಅಂಬೆಕಲ್ಲು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply