ರಾಜ್ಯಕ್ಕೆ ಮಾದರಿ ಕೊಡವೂರು.

ಉಡುಪಿ ನಗರಸಭೆಯಲ್ಲಿ ಒಂದಾಗಿರುವ ಕೊಡವೂರು ವಾರ್ಡಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಉತ್ತರ ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಜಯ್ ಕೊಡವೂರು ಅವರ ಯೋಚನೆ ಯೋಜನೆಯು ಮಾದರಿಯ ಕಾರ್ಯವು ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ.

ಈ ಮೂಲಕ ನರೇಂದ್ರ ಮೋದಿಯವರ ಕಲ್ಪನೆ, ಯೋಚನೆ ಯೋಜನೆಯು ಪ್ರತಿಯೊಂದು ಮನೆಗೂ ತಲುಪಿಸುವುದು ಮಾದರಿ ಯಾಗಿದೆ. ಈ ಸೇವಾ ಕಾರ್ಯವನ್ನು ಗಮನಿಸಿ ಅಯ್ಯಪ್ಪ ಸೇವಾ ಸಮಿತಿಯ ರಾಜ್ಯ ಸಮ್ಮೇಳನದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಗುರುತಿಸಿ ಗೌರವಿಸುವ ಕಾರ್ಯ ನಡೆಯಿತು.

ಉಡುಪಿ ಜಿಲ್ಲಾ ಅಯ್ಯಪ್ಪ ಸೇವಾ ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಕೊಡವೂರು ಮಾತನಾಡಿ, ಕೊಡವೂರು ವಾರ್ಡಿನಲ್ಲಿ ಎಲ್ಲಾ ಕಾರ್ಯಕರ್ತರ ಮತ್ತು ನಾಗರಿಕರ ಶ್ರಮದಲ್ಲಿ ಸೇವಾ ಕಾರ್ಯ ಆಗಿದ್ದು, ಇದನ್ನು ಗುರುತಿಸುವ ಕಾರ್ಯ ಅಯ್ಯಪ್ಪ ಸೇವಾ ಸಮಿತಿಯ ಹಿರಿಯ ಮೂಲಕ ಆಗಿದ್ದು ಸಂತೋಷ ಆಗಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯ ಮಾಡೋಣ ಎಂದರು.

ಈ ಸಂಧರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಜಯರಾಮ್ ಜಿ, ಉಡುಪಿ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್, ರಂಜಿತ್ , ಗೋಪಾಲ್ ಗುರು ಸ್ವಾಮಿ ಕಾಪು, ಸುಂದರ್, ಗುರು ಸ್ವಾಮಿ, ಗಣೇಶ್ ಕೋಟ, ಸಂಘಟನಾ ಕಾರ್ಯದರ್ಶಿ ರಂಜಿತ್ ಹಾವಂಜೆ ಮತ್ತಿರಾರು ಹಾಜರಿದ್ದರು.

 
 
 
 
 
 
 
 
 
 
 

Leave a Reply