ನಗರ ಭಾಗವತರ ಕುಟುಂಬಕ್ಕೆ ಅಭಿಮಾನಿಗಳಿಂದ ಧನ ಸಹಾಯ ವಿತರಣೆ

ಬಡಗುತಿಟ್ಟು ಯಕ್ಷಗಾನದ ಹೆಸರಾಂತ ಭಾಗವತ ಹಾಗೂ ಉದಯೋನ್ಮುಖ ಕಲಾವಿದ  ನಗರ ಸುಬ್ರಹ್ಮಣ್ಯ ಆಚಾರ್ಯರವರು ದಿನಾಂಕ: 07-01-2020ರಂದು ಅಕಾಲಿಕ ಮರಣವನ್ನಪ್ಪಿದ ಹಿನ್ನೆಲೆಯಲ್ಲಿ  ಅವರ ಅಭಿಮಾನಿಗಳು  ಉಡುಪಿಯ ನ್ಯಾಯವಾದಿ & ನೋಟರಿ ಶ್ರೀ ಆತ್ರಾಡಿ ಪೃಥ್ವಿರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಭಾಗವತ ದಿ. ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿಗಳ ಬಳಗವನ್ನು ಹುಟ್ಟು ಹಾಕಿ ದಿವಂಗತರ ಕುಟುಂಬಕ್ಕೆ ಧನ ಸಹಾಯ ಮಾಡುವ ಸಂಕಲ್ಪವನ್ನು ಮಾಡಿದರು. 
 
ಅದರಂತೆ ದಿವಂಗತರ ಅಭಿಮಾನಿಗಳು ದಾನ ನೀಡಿದ ಒಟ್ಟು ರೂಪಾಯಿ 1,11,000-00 (ಒಂದು ಲಕ್ಷದ ಹನ್ನೊಂದು ಸಾವಿರ) ನಗದು ಹಣವನ್ನು ದಿನಾಂಕ 12-08-2021ರಂದು ಭಾಗವತರ ಪತ್ನಿ ಶ್ರೀಮತಿ ಸರಸ್ವತಿ ಆಚಾರ್ ರವರಿಗೆ ಉಡುಪಿಯಲ್ಲಿರುವ ಬಳಗದ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು. 
 
ಈ ಸಂದರ್ಭದಲ್ಲಿ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಶ್ರೀ ಆತ್ರಾಡಿ ಪೃಥ್ವಿರಾಜ ಹೆಗ್ಡೆ,  ಪ್ರಧಾನ ಕಾರ್ಯದರ್ಶಿ, ಯಕ್ಷಗಾನ ಕಲಾವಿದ ಶ್ರೀ ದಿನಕರ ಮರಕಾಲ ನಡೂರು, ನಿವೃತ್ತ ಶಿಕ್ಷಕ ಶ್ರೀ ವಾಸು ಆಚಾರ್ ಪರ್ಕಳ ಹಾಗೂ ಶ್ರೀ ಥೋಮಸ್ ಸುವಾರಿಸ್ ಉಪ್ಪೂರು ಹಾಜರಿದ್ದರು.
ಸಹಾಯ ಧನ ಸ್ವೀಕರಿಸಿ ಸಾಂದರ್ಭಿಕವಾಗಿ ಮಾತನಾಡಿದ ಶ್ರೀಮತಿ ಸರಸ್ವತಿ ಅಚಾರ್ಯರವರು ಕೊರೋನಾ ಮಹಾಮಾರಿ ಕಾಯಿಲೆಯಿಂದಾಗಿ ಇಡೀ ದೇಶವೇ ಸಂಕಷ್ಟದಲ್ಲಿರುವಾಗ ತನ್ನ ಕೀರ್ತಿಶೆಷ ಪತಿಯ ಅಭಿಮಾನಿಗಳ ಬಳಗದ ಸದಸ್ಯರುಗಳು ನಿರೀಕ್ಷೆಗೂ ಮೀರಿದ ಮೊತ್ತವನ್ನು ಕಲೆಹಾಕುವಲ್ಲಿ ತೋರಿದ ಬದ್ಧತೆಯನ್ನು ಶ್ಲಾಘಿಸಿದರು. 
 
ತನ್ನ ಕುಟುಂಬ ಆರ್ಥಿಕವಾಗಿ ದುಸ್ಥಿತಿದಲ್ಲಿರುವಾಗ ಮಾನವೀಯತೆಯಿಂದ ಧನ ಸಹಾಯ ನೀಡಿ ಸಹಕರಿಸಿದ್ದಕ್ಕೆ ಅಭಿಮಾನಿಗಳ ಬಳಗದ ಎಲ್ಲಾ ಪದಾಧಿಕಾರಿಗಳನ್ನು ಮತ್ತು ಸದಸ್ಯರುಗಳನ್ನೂ ಕೊಂಡಾಡಿದ ಅವರು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

(ಭಾಗವತರ ಕುಟುಂಬಕ್ಕೆ ಧನ ಸಹಾಯ ಮಾಡಲಿಚ್ಚಿಸುವ ಅಭಿಮಾನಿಗಳು ಭಾಗವತರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಆಚಾರ್ಯರು ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ ಹೋಲಿ ರೋಸರಿ ಚರ್ಚ್ ಕಂಪೌಂಡ್ ಸಂತೆಕಟ್ಟೆ ಶಾಖೆ ಯಲ್ಲಿ ಹೊಂದಿರುವ ಉಳಿತಾಯ ಖಾತೆ ನಂಬ್ರ: 520101021819838 IFSC-UBINO 907332 ಕ್ಕೆ ಜಮೆ ಮಾಡಬಹುದಾಗಿರುತ್ತದೆಂದು ಅಭಿಮಾನಿಗಳ ಬಳಗದ ಅಧ್ಯಕ್ಷರು ತಿಳಿಸಿರುತ್ತಾರೆ) (ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ  ಸಂತೆಕಟ್ಟೆ ಶಾಖೆ ಪೋನ್-08202582833)

 
For detail Contact No: Athradi Prathwiraj Hegde +91 98452 30926
 
 
 
 
 
 
 
 
 
 
 

Leave a Reply