ಮಂಗಳೂರು ವಿವಿ ದ್ವೀತಿಯ ಸೇಮೆಸ್ಟರ್ ನ ಪ್ರಶ್ನೆ ಪತ್ರಿಕೆಯಲ್ಲಿ ಪ್ರಥಮ ಸೇಮೆಸ್ಟರ್ ನ ಪ್ರಶ್ನೆಗಳು!

ಮಂಗಳೂರು ವಿಶ್ವವಿದ್ಯಾಲಯದ ಬಿಬಿಎ ಪದವಿ ವಿದ್ಯಾರ್ಥಿಗಳ ದ್ವೀತಿಯ ಸೇಮೆಸ್ಟರ್ ನ ಕನ್ನಡ ವಿಷಯದ ಪರೀಕ್ಷೆಯು ಇಂದು ದಿನಾಂಕ 05/09/2022 ರ ಸೋಮವಾರದಂದು ನಿಗದಿಯಾಗಿತ್ತು, ಅದರಂತೆ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಿದ್ದರು ಆದರೆ ದ್ವೀತಿಯ ಸೇಮೆಸ್ಟರ್ ನ ಪ್ರಶ್ನೆ ಪತ್ರಿಕೆಯಲ್ಲಿ ಪ್ರಥಮ ಸೇಮೆಸ್ಟರ್ ನ ಪ್ರಶ್ನೆಗಳು ಕಂಡುಬಂದಿದ್ದರಿಂದ ಪರೀಕ್ಷಾ ಕೊಠಡಿಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು, ತದನಂತರ ವಿವಿಯ ಆದೇಶದ ಮೇರೆಗೆ ಇಂದಿನ ಪರೀಕ್ಷೆಯನ್ನು ರದ್ದುಪಡಿಸಿ ಮುಂದೂಡಲಾಗಿದೆ.

ಈ ಬೆಳವಣಿಗೆಯಿಂದ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬೇರೆಯದೇ ನಿರಾಸೆಯಿಂದ ಮನೆಗೆ ಹಿಂತಿರುಗಿ ಹೋಗಿದ್ದಾರೆ, ಬಹುತೇಕ ವಿದ್ಯಾರ್ಥಿಗಳಲ್ಲಿ ಇದರಿಂದ ಆತ್ಮವಿಶ್ವಾಸ ಕುಂದುಹೋಗಿದ್ದು, ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಪರೀಕ್ಷಾ ವಿಭಾಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿವಿಯ ಬೇಜವಾಬ್ದಾರಿಯುತ ಕಾರ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು, ಈ ಅವಾಂತರಕ್ಕೆ ಕಾರಣವಾದವರನ್ನು ತಕ್ಷಣವೇ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಈ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕೆಂದು ಎಸ್.ಐ.ಓ ಉಡುಪಿ ಈ ಮೂಲಕ ಆಗ್ರಹಿಸುತ್ತದೆ.

 
 
 
 
 
 
 
 
 
 
 

Leave a Reply