ಮುಂಡ್ಲಿ ಡ್ಯಾಮ್ ನಲ್ಲಿ ವಿಶ್ವ ನದಿ ದಿನಾಚರಣೆ 

ಯೂತ್ ಫಾರ್ ಸೇವಾ ಉಡುಪಿ ತಂಡದ  ಆಶ್ರಯದಲ್ಲಿ ಯುವ ಸ್ಪಂದನ ಗೆಳೆಯರ ಬಳಗ ಮತ್ತು ತರುಣ ಭಾರತ ತಂಡ ಹೆರ್ಮುಂಡೆ ಇವರ ಸಹಯೋಗದೊಂದಿಗೆ ವಿಶ್ವ ನದಿ ದಿನಾಚರಣೆಯ ಪ್ರಯುಕ್ತ ದುರ್ಗಾ ಗ್ರಾಮದ ಮುಂಡ್ಲಿ ಡ್ಯಾಮ್ ನಲ್ಲಿ ಸ್ಥಳೀಯ ಯುವಕರಿಗೆ ನದಿ ಸ್ವಚ್ಛತೆ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ನದಿ ದಡದಲ್ಲಿ ಔಷದಿ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ನದಿ ಸಂರಕ್ಷಣೆ ಮತ್ತು ಪರಿಸರ ಪರ್ಯಾಯವರಣದ ಜಿಲ್ಲಾ ಸಂಯೋಜಕರು ಮತ್ತು ನಿಟ್ಟೆ ಕಾಲೇಜಿನ ಪ್ರೊಫೆಸರ್  ಆಗಿರುವ ಡಾ। ಸುರೇಂದ್ರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಹಸಿರುಮನೆ, ಇಕೋ ಬ್ರಿಕ್ಸ್, ಹಾಗೂ ನದಿಯ ಸುತ್ತ ಮುತ್ತಲು ಆಯುರ್ವೇದಿಕ್ ಸಸಿಗಳನ್ನು ನೆಟ್ಟಲ್ಲಿ ಅದರಿಂದ ಆಗುವ ಪ್ರಯೋಜನವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ದುರ್ಗಾ ಪಂಚಾಯಿತಿಯ ಅಧ್ಯಕ್ಷರಾಗಿರುವ ಸತೀಶ್ ನಾಯಕ್ ಹಾಗೂ ಯೂತ್ ಫಾರ್ ನ ಸೇವಕಿ ಶ್ರೀಮತಿ ರಮಿತಾ ಶೈಲೇಂದ್ರ, ಹೆರ್ಮುಡೇ ಸತೀಶ್ ಹೆಗ್ಗಡೆಯವರು ಹಾಗೂ ಯುವ ಸ್ಪಂದನ ಮತ್ತು ತರುಣ ಭಾರತದ ತಂಡದ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply