​370 ಟ್ರಾಲ್ ಬೋಟ್ ಯೂನಿಯನ್ ವತಿಯಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ದೇಣಿಗೆ

ಮಲ್ಪೆ: ಸಮಸ್ತ ಮೊಗವೀರರರ ಕುಲದೇವರಾದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಕಾಮಗಾರಿಯು ದ​.​ಕ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಮೊಗವೀರ ಮುಖಂಡ ನಾಡೋಜ ಡಾ ಜಿ ಶಂಕರ್ ರವರ ಮಾರ್ಗದರ್ಶನ ದಲ್ಲಿ ಬರದಿಂದ ಸಾಗುತ್ತಿದ್ದು ಈಗಾಗಲೇ ಕಲ್ಲಿನ ಕೆತ್ತನೆಯ ಕೆಲಸ ಮತ್ತು ಮರದ ಕೆತ್ತನೆಯ ಕಾಮಗಾರಿಗಳು ಬರದಿಂದ ಸಾಗುತ್ತಿದೆ.ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ  ದೇವಸ್ಥಾನಕ್ಕೆ ಮಲ್ಪೆ 370 ಟ್ರಾಲ್ ಬೋಟ್ ಯೂನಿಯನ್ ವತಿಯಿಂದ  ದೇಣಿಗೆಯಾಗಿ  ರೂಪಾಯಿ 5ಲಕ್ಷ ನೀಡಲಾಯಿತು .

  ಈ ಸಂದರ್ಭದಲ್ಲಿ ಮಲ್ಪೆ 370 ಟ್ರಾಲ್ ಬೋಟ್ ಯೂನಿಯನ್  ಅಧ್ಯಕ್ಷ ಮೋಹನ್ ಕುಂದರ್, ಕಾರ್ಯದರ್ಶಿ ಸತೀಶ್  ಸಾಲ್ಯಾನ್, ಉಪಾಧ್ಯಕ್ಷರುಗಳಾದ ಕಿರಣ್ ಕುಂದರ್, ಕೃಷ್ಣ ಜಿ ಕೋಟ್ಯಾನ್, ಪದಾಧಿಕಾರಿಗಳಾದ ನಾಗರಾಜ್  ಕುಂದರ್, ಸಂತೋಶ್, ಶಂಕರ್ ಬಂಗೇರ, ಶ್ರೀನಿವಾಸ್, ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್, ಸುಧಾಕರ ಕುಂದರ್  ಮತ್ತು ಇತರ ಪದಾಧಿಕಾರಿಗಳು ಮತ್ತು  ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯಾನ್ ಉಪಸ್ಥಿತರಿದ್ದರು​. ​ ಮಹಾಜನ ಸಂಘದ ಅಧ್ಯಕ್ಷರಾದ ಜಯ​. ​ಸಿ ಕೋಟ್ಯಾನ್ ಮಾತನಾಡಿ ಮಲ್ಪೆ  ಟ್ರಾಲ್ ಬೋಟ್ ಯೂನಿಯನ್   ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಅಪಾರವಾದ ಕೊಡುಗೆಯನ್ನು ನೀಡಿದೆ​.   ಎಲ್ಲಾ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಯಾವೊಂದು ವಿಗ್ನ ಎದುರಾಗದೆ ಮುಂದಿನ ದಿನಗಳಲ್ಲಿ ಹೇರಳವಾದ ಮತ್ಸ್ಯ ಸಂಪತ್ತು ಮೀನುಗಾರರಿಗೆ ಸಿಗುವಂತಾಗಲಿ ಮತ್ತು ಇನ್ನೂ ಹೆಚ್ಚಿನ ಕೊಡುಗೆಯನ್ನು ದೇವಸ್ಥಾನಕ್ಕೆ ನೀಡುವಂತಾಗಲಿ ಎಂದು ತಾಯಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥಿಸಿದರು.

 
 
 
 
 
 
 
 
 
 
 

Leave a Reply