ಮಂಗಳೂರಿನ ಕುಳಾಯಿ ಅಡ್ಡ ಕಂಬೆರ್ಲ ಕಲ ರಸ್ತೆ ಅಭಿವೃದ್ಧಿ – ಶಾಸಕ ಡಾ ಭರತ್ ಶೆಟ್ಟಿ ಗುದ್ದಲಿಪೂಜೆ

ಮಂಗಳೂರು : ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಶಾಸಕರ ವಿಶೇಷ ಮುತುವರ್ಜಿಯಿಂದ ಮನಪಾ ವ್ಯಾಪ್ತಿಯ 9 ನೇ ವಾರ್ಡಿನ ಕುಳಾಯಿ ಅಡ್ಡ ಕಂಬೆರ್ಲ ಕಲ ರಸ್ತೆ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು , ಶಾಸಕ ಡಾ ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ವಿಠ್ಠಲ್ ಸಾಲಿಯಾನ್ ಅಧ್ಯಕ್ಷ ಮಹಾಶಕ್ತಿ ಕೇಂದ್ರ ಸುರತ್ಕಲ್ , ಸುನಿಲ್ ಕುಳಾಯಿ ಕಾರ್ಯದರ್ಶಿ ಮಹಾಶಕ್ತಿ ಕೇಂದ್ರ , ಶ್ರೀಮತಿ ವೇದಾವತಿ ಮಾಜಿ ಉಪ ಮೇಯರ್, ಯೋಗಿಶ್ ಸನಿಲ್ ಕುಳಾಯಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ರಾಮನಾಥ್ ಕೊಡಿಕೆರೆ ಬೂತ್ ಅಧ್ಯಕ್ಷರು, ಎಮ್ ಟಿ ಸಾಲಿಯಾನ್, ಪವಿತ್ರ ನಿರಂಜನ್, ಕೆ ಭಾರತ್ ಶೆಟ್ಟಿ ನಾಗರಿಕಾ ಸಮಿತಿ ಅಧ್ಯಕ್ಷರು, ರಾಜೇಂದ್ರ ಸಂಚಾಲಕರು, ಜಗನ್ನಾಥ ಶೆಟ್ಟಿ ಕುಳಾಯಿಗುತ್ತು, ಚಂದ್ರಹಾಸ ಪೂಜಾರಿ, ಬೇಬಿ ಪದ್ಮನಾಭ್, ಗುತ್ತಿಗೆದಾರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply