ಸ್ವವೃತ್ತಿ ಬಾಂಧವರ ಭೇಟಿ..

ವೃತ್ತಿ ಬಾಂಧವರಲ್ಲಿ ಸೌಹಾರ್ದಯುತ ಸ್ನೇಹ , ಪರಸ್ಪರ ಹೊಂದಾಣಿಕೆ, ಸದ್ವಿಚಾರ ವಿನಿಮಯ ಇದ್ದಾಗ ವ್ಯಕ್ತಿಗತ ಅಭಿವೃದ್ಧಿಯೊಂದಿಗೆ ವೃತ್ತಿ ರಂಗದಲ್ಲೂ ಗಣನೀಯ ಪ್ರಗತಿ ಸಾಧ್ಯ ಎಂಬ ಆಶಯದೊಂದಿಗೆ ಮಾಧ್ಯಮ ಮಿತ್ರರಾದ ಗಣೇಶ್ ನಾಯಕ್ ಅಭಿಪ್ರಾಯ ಪಟ್ಟರು. ಉಡುಪಿ ಬುಲೆಟಿನ್ ವೆಬ್ ಪತ್ರಿಕೆಯ ಗಣೇಶ್ ನಾಯಕ್ ರವರು ಕರಾವಳಿ ಎಕ್ಸ್ ಪ್ರೆಸ್ .ಕಾಮ್ ನ ಜನಾರ್ದನ್ ಕೊಡವೂರು ಇವರ ಕಚೇರಿಗೆ ಭೇಟಿ ನೀಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ಉಡುಪಿ ಬುಲೆಟಿನ್ ಮಾಸ ಪತ್ರಿಕೆಯ ಸ್ಪೆಷಲ್ಜ ಎಡಿಷನ್ ಜನಾರ್ದನ್ ಕೊಡ ವೂರು ಬಿಡುಗಡೆಗೊಳಿಸಿದರು. ಬಳಿಕ ಗಣೇಶ್ ನಾಯಕ್ ರವರಿಗೆ ಶಾಲು ಹೊದಿಸಿ ಗೌರವಿಸಿ ದರು.  

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಉಡುಪಿ ತಾಲೂಕಿನ ಅಧ್ಯಕ್ಷೆ, ಉಡುಪ ರತ್ನಪ್ರತಿಷ್ಟಾ ನದ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply