“ ಮನೆಯಂಗಳದಲ್ಲಿ ಸಾಹಿತ್ಯ ಹಾಗೂ ಯಕ್ಷಗಾನ ಸಂಭ್ರಮ”

ಕನ್ನಡ ಸಾಹಿತ್ಯ ಪರಿಷತ್ , ಬ್ರಹ್ಮಾವರ ತಾಲೂಕು ಘಟಕ, ಮತ್ತು ಗೆಳೆಯರ ಬಳಗ(ರಿ.) ಕಾರ್ಕಡ, ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ
“ ಮನೆಯಂಗಳದಲ್ಲಿ ಸಾಹಿತ್ಯ ಹಾಗೂ ಯಕ್ಷಗಾನ ಸಂಭ್ರಮ”
ದಿನಾಂಕ: ೩೦-೦೪-೨೦೨೨ , ಶನಿವಾರ
( ಸಂಜೆ)ಭೂಮಿಕಾ ಮನೆಯಂಗಳ. ಕಾರ್ಕಡ” ದಲ್ಲಿ ಜರಗಿತು. ಸಮಾರಂಭದ
ಅಧ್ಯಕ್ಷತೆಯನ್ನ್ನುಶ್ರೀ ನೀಲಾವರ ಸುರೇಂದ್ರ ಅಡಿಗರು, ಅಧ್ಯಕ್ಷರು, ಕಾ ಸ ಪ ಉಡುಪಿ ಜಿಲ್ಲೆ, ವಹಿಸಿದ್ದರು.
ದೀಪ ಪ್ರಜ್ವಲಿಸುವ ಮೂಲಕ ಶ್ರೀ ಜನಾರ್ದನ ಹಂದೆ, ಕಲಾ ಸಾಹಿತಿ, ಮಂಗಳೂರು ಉದ್ಘಾಟಿಸಿದರು.

ಘರ್ಷಣೆಯಿಂದಲೇ ದೀಪದ ಹುಟ್ಟು ಸಾಧ್ಯವಾಗುವುದು. ಅಂತಯೇ ಮನಸ್ಸು ಮತ್ತು ಹೃದಯದ ಭಾವದೀಪದ ತಾಕಲಾಟದಿಂದ ಸಾಹಿತ್ಯದ ಹುಟ್ಟು. ದೀಪದಿಂದ ದೀಪ ಬೆಳಗುವ ಹಾಗೆ ಮನೆ ಅಂಗಳ ಸಾಹಿತ್ಯದ ದೀಪ ಕನ್ನಡ ಸಾಹಿತ್ಯ ಜ್ಯೋತಿಯನ್ನು ಬೆಳಗಬಲ್ಲದು. ಗೆಳೆಯರ ಬಳಗದ ಅಧ್ಯಕ್ಷರಾದ ತಾರಾನಾಥ ಹೊಳ್ಳರ ಮನೆಯಂಗಳದಲ್ಲಿ ನಡೆಯುತ್ತಿರುವ ಸತತ ಸಾಹಿತ್ಯಾರಾಧನೆ ಅಭಿನಂದನೀಯ ಎಂದು ಕಲಾ ಸಾಹಿತಿ ಮಂಗಳೂರಿನ ಜನಾರ್ದನ ಹಂದೆ ಹೇಳಿದರು.

ಸಮಾರಂಭದಲ್ಲಿ ಉಪ ಸ್ಥಿತರಿದ್ದರು.ಸಭೆಯಲ್ಲಿ.
ಕೆ. ತಾರನಾಥ ಹೊಳ್ಳ, ಅಧ್ಯಕ್ಷರು, ಗೆ. ಬಳಗ(ರಿ), ಕಾರ್ಕಡ
ಜಿ. ರಾಮಚಂದ್ರ ಐತಾಳ, ಅಧ್ಯಕ್ಷರು, ಕಾ. ಸ.ಪ, ಬ್ರಹ್ಮಾವರ ತಾಲೂಕು.
ಕೆ ಅಚ್ಚುತ ಪೂಜಾರಿ, ಅಧ್ಯಕ್ಷರು,ಕ ಸಾ ಪ, ಕೋಟ ಹೋಬಳಿ,ಹಾಗೂ ಶ್ರೀ ನಾಗರಾಜ ಅಲ್ತಾರ್- ಕೋಶಾಧಿಕಾರಿ,ಬ್ರಹ್ಮಾವರ ತಾಲೂಕು ಘಟಕ, ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವತ ಶ್ರೀ ರಾಘವೇಂದ್ರ ಮಯ್ಯ ದಂಪತಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿದರು. ಮಯ್ಯರು ಬಳಗದವರ ಕಲಾ ಸೇವೆಯನ್ನು ಶ್ಲಾಘಿಸಿದರು. ಅಚ್ಚುತ ಪೂಜಾರಿ ಸ್ವಾಗತಿಸಿದರು. ಬಳಗದ ಶ್ರೀ ಕೆ. ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಧ್ಯಕ್ಷ ಪ್ರಾಸ್ಥಾವಿಕ ಮಾತನಾಡಿದರು. ಬಳಗದ ಕಾರ್ಯದರ್ಶಿ ಕೆ. ಶೀನ ವಂದಿಸಿದರು. ಪ್ರಾರಂಭದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಭಾವಗೀತೆ, ಶೋಭಾನೆ ಹಾಡು, ಕನ್ನಡ ನಾಡು ನುಡಿ ಬಿಂಬಿಸುವ ಹಾಡುಇತ್ಯದಿ ಜರುಗಿ ಕೆೊನೆಯಲ್ಲಿ “ ಮಯ್ಯ ಯಕ್ಷಬಳಗ, ಹಾಲಾಡಿ “ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ, “ಪಾಂಚಜನ್ಯ ಹಾಗೂ ಶ್ರೀ ಕೃಷ್ಣ ಪರಂಧಾಮ” ಜನ ಮನ ರಂಜಿಸಿತು.

 
 
 
 
 
 
 
 
 
 
 

Leave a Reply