ನಮ್ಮ ಹಿಂದೂ ಧರ್ಮದ ರಕ್ಷಣೆಗಾಗಿ ನಾವೂ ಸಿದ್ಧರಿರಬೇಕು -ಈಶಪ್ರಿಯತೀರ್ಥ ಶ್ರೀಪಾದರು

ಉಡುಪಿ :  ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀಅದಮಾರು ಮಠದ ಸೇವೆಯಲ್ಲಿರುವ ಎ.ವೆಂಕಟೇಶ,ಗ್ರಾಮೀಣ ಅಂಚೆ ಪೇದೆಯಾಗಿರುವ ಪ್ರದೀಪ್ ಕುಮಾರ್ ಗೆ ಸನ್ಮಾನ ನಡೆಸಿ,ರಾಜನೊಬ್ಬ ತನ್ನ ರಾಜ್ಯದ ರಕ್ಷಣೆಗೆ ಸಮರ್ಥ ಸೈನ್ಯವನ್ನು ಕಟ್ಟುತ್ತಾನೋ ಹಾಗೆ ನಮ್ಮ ಹಿಂದೂ ಧರ್ಮದ ರಕ್ಷಣೆಗಾಗಿ ನಾವೂ ಸಿದ್ಧರಿರಬೇಕು ಎಂದು ನೆನಪಿಸಿ ಅನುಗ್ರಹಿಸಿದರು.

ಶ್ರೀವಜ್ರದೇಹಿ ಮಠ ಗುರುಪುರದ ಶ್ರೀರಾಜಶೇಖರಾನಂದ ಸ್ವಾಮೀಜಿಯವರು ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಹಿಂದೂ ಸೈನಿಕ ಹುಟ್ಟಿ ಬೆಳೆದು ನಮ್ಮ ನಾಡು ರಾಮ ರಾಜ್ಯವಾಗುವಲ್ಲಿ ನೆರವಾಗಬೇಕು ಎಂದು ಹರಸಿದರು.

ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ,”ಹಿಂದೂ ಅಸ್ಮಿತೆ”ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಅಭ್ಯಾಗತರಾಗಿ ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಅರ್ಚಕ ವಾಸುದೇವ ಅಸ್ರಣ್ಣ, ವಿ. ವೆಂಕಟರಮಣ ಅಸ್ರಣ್ಣ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply