ಕೋರ್ಟ್ ತೀರ್ಪು ಬರುವ ತನಕ ಸಮವಸ್ತ್ರ ಪದ್ದತಿ​ಯೇ  ಇರಲಿ- ಯು.ಟಿ.ಖಾದರ್ 

ಕೋರ್ಟ್ ಹೊರಗಡೆಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಎಲ್ಲಾ ಕಡೆ ಕೋರ್ಟೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ.​ ​ಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.​ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ. 

ಶಾಲೆ ಕಟ್ಟಲು ಸಾಕಷ್ಟು ಹಣ ಬರುತ್ತಿತ್ತು.​ ​ಇವತ್ತು ಬಿಜೆಪಿಯವರು ಒಂದು ಶಾಲೆ ಕಟ್ಟಿದ್ದಾರಾ. ಉಚಿತ ಲ್ಯಾಪ್‌ಟಾಪ್, ಹೆಚ್ಚಿನ ಸ್ಕಾಲರ್‌ಶಿಪ್‌ ಕೊಡುತ್ತಿದ್ವೀರಾ.​ ​ಈ ಸೌಲಭ್ಯಗಳು ಬಿಜೆಪಿ ಸರ್ಕಾರದಲ್ಲಿದ್ಯ.?.​ ​ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದು ಬಿಜೆಪಿ.​ ​ಕಾಂಗ್ರೆಸ್ ಸಂವಿಧಾನದ ಪ್ರಕಾರ ಕೆಲಸ ಮಾಡ್ತಿದೆ.​ ​ರಾಜಕೀಯ ಲಾಭ ಪಡೆಯಲು ಮುಂದಾಗಿರುವವರೇ ಕಾಂಗ್ರೆಸ್‌ ವಿರುದ್ದ ಮಾತುಗಳನ್ನಾಡುತ್ತಿದ್ದಾರೆ ಯು.ಟಿ.ಖಾದರ್ ಟೀಕಿಸಿದರು.

​​ಹೆತ್ತವರಿಗೆ ಮಾತ್ರ ಮಕ್ಕಳ‌ ನೋವು ಗೊತ್ತಾಗೋದು‌.​ ​ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗವನ್ನ ಒಟ್ಟಿಗೆ ಕೊಂಡೊಯ್ಯಬೇಕು.​ ​ನಿರ್ಭಯವಾಗಿ ವ್ಯಾಸಂಗ ಮಾಡಲು ಅವಕಾಶ ನೀಡಬೇಕು.​ ​ಕೂಡಲೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು. ಯು.ಟಿ.ಖಾದರ್ ಹೇಳಿದರು.

 
 
 
 
 
 
 
 
 
 
 

Leave a Reply