ಮುದ್ದು ಕೃಷ್ಣ ಮತ್ತು ಮುದ್ದು ರಾಧಾ ವೇಷ ಸ್ಪರ್ಧೆ

ಶ್ರೀ ವಿಧ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ LKG.ಮತ್ತು UKG ವಿದ್ಯಾರ್ಥಿ ಗಳಿಗಾಗಿ ಮುದ್ದು ಕೃಷ್ಣ ಮತ್ತು ಮುದ್ದು ರಾಧಾ ವೇಷ ಸ್ಪರ್ಧೆ ಯನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಶಾಲಾ ಮುಖ್ಯೋಪಾಧ್ಯಾರಾದ ಶ್ರೀಮತಿ ಪ್ರೀತಿ ರೇಖಾ ವಹಿಸಿದ್ದರು.

SRSNHP ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಯಾಗಿ ನಿವೃತಿ ಹೊಂದಿದ ಶ್ರೀಮತಿ ಗೌರಿ ಟೀಚರ್ ರವರು ದೀಪ ಬೆಳಗಿಸುವ ಮೂಲಕ ಸ್ಪರ್ಧೆ ಯನ್ನು ಉದ್ಘಾಟಿಸಿ, “ಕೃಷ್ಣಮತ್ತು ರಾಧೆ ಯ ವೇಷ ತೊಟ್ಟ ಮಕ್ಕಳು ನಮ್ಮನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗಿ ಕೃಷ್ಣ ಮತ್ತು ರಾಧಾ ಲೀಲೆಯನ್ನು ತೋರಿಸಿದರು “ಎಂದು ತಮ್ಮ ಮಾತುಗಳನ್ನು ಆಡಿದರು. ಸ್ಪರ್ಧೆ ಯ ತೀರ್ಪುಗಾರ ರಾಗಿ ಉಡುಪಿಯ ಮಾಸ್ಟರ್ ಡ್ರಾಮ್ ದ ಭರತ ನಾಟ್ಯ ಶಿಕ್ಷಕಿ ಶ್ರೀಕಲ್ಯಾಣಿ ಮತ್ತು S.V.V.N ಹೇರಾಡಿ ಶಾಲೆಯಲ್ಲಿ ಭರತ ನಾಟ್ಯ ಶಿಕ್ಷಕಿ ಯಾದ ಶ್ರೀಮತಿ ಸ್ಮಿತಾ ಶಾಸ್ತ್ರೀ ರವರು ಕಾರ್ಯ ನಿರ್ವಹಿಸಿದ್ದರು.

ಶಾಲೆಯ 32 ಮಕ್ಕಳು ವೇಷ ತೊಟ್ಟು ರಂಜಿಸಿದರು.
ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕಿ ರಾದ ಶ್ರೀಮತಿ ಚಂದ್ರ ಕಲಾ, ಶ್ರೀಮತಿ ಕುಸುಮ, ಶ್ರೀಮತಿ ಶುಭ ರಾವ್, ಶಾಲಾ ಆಫೀಸ್ ಸಹಾಯ ಕಾರದ ಶ್ರೀ ನಾಗರಾಜ್ ಶೇರಿಗಾರ್ ಮತ್ತು ಅಟೆಂಡರ್ ಶ್ರೀ ವಿಜಯ ಪೂಜಾರಿ , ಶಾಲಾ ಶಿಕ್ಷಕ, ಶಿಕ್ಷಕೇತರರು ಸಂಯೋಜನೆ ಮಾಡಿ ಸಹಕರಿಸಿದರು , , ವಿದ್ಯಾರ್ಥಿ ಗಳಿಗೆ ಮಾಸ್ತರ್ ಡ್ರಾಮಾ ದವರು ವೇಷಭೂಷಣದ ವ್ಯವಸ್ಥೆ ಮಾಡಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿಶೇಷ ರೀತಿಯ ಉಡುಗೊರೆ ಕೊಡಲಾಯಿತು.

 
 
 
 
 
 
 
 
 
 
 

Leave a Reply