ಕುಮಾರವ್ಯಾಸ ಭಾರತದ ಕರ್ಣಭೇದನ ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನ

ರೋಟರಿ ಕ್ಲಬ್ ಸಿದ್ದಾಪುರ- ಹೊಸಂಗಡಿ ಹಾಗೂ ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತುಗಳ ಜಂಟಿ ಆಶ್ರಯದಲ್ಲಿ ಕುಮಾರವ್ಯಾಸ ಭಾರತದ ಕರ್ಣಭೇದನ ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಸಿದ್ದಾಪುರ ರೋಟರಿ ಕ್ಲಬ್ಬಿನಲ್ಲಿ ನಡೆಯಿತು. 
ಡಾ.ಶ್ರೀಕಾಂತ್ ರಾವ್ ಸಿದ್ದಾಪುರ ವಾಚನ ನಡೆಸಿದರೆ, ಡಾ.ಜಗದೀಶ್ ಶೆಟ್ಟಿ ಮತ್ತು ಧನಂಜಯ ಚಾತ್ರ ವ್ಯಾಖ್ಯಾನ ನಡೆಸಿಕೊಟ್ಟರು. ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ಅವರನ್ನು ಕ್ಲಬ್ಬಿನ ಪರವಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪರು ಸನ್ಮಾನಿಸಿದರು. 
 
ರೋಟರಿ ಕ್ಲಬ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ, ಸಾಹಿತ್ಯ ಪರಿಷತ್ತಿನ ಸುಬ್ರಹ್ಮಣ್ಯ ಶೆಟ್ಟಿ, ದಿನಕರ ಶೆಟ್ಟಿ, ರೋ. ಚೆನ್ನ ಪೂಜಾರಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply