ಸಂಸ್ಥಾಪನಾ ದಿನಾಚರಣೆ, ಗೌರವಾಪ೯ಣೆ ಕಾಯ೯ಕ್ರಮ

ಉಡುಪಿ :- ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಅಭಿನಂದನಾ ಕಾಯ೯ಕ್ರಮ ಎ.3ರಂದು ಉಡುಪಿ ಇನ್ ವಠಾರದಲ್ಲಿ ನಡೆಯಿತು.

ಈ ಸಂದಭ೯ದಲ್ಲಿ ಖ್ಯಾತ ರಕ್ತದಾನಿ, ಸಮಾಜ ಸೇವಕ ದಿನೇಶ್ ಬಾಂಧವ್ಯ ರವರನ್ನು ಗೌರವಿಸಲಾಯಿತು.
ಈ ಸಂದಭ೯ ಮುಖ್ಯ ಅತಿಥಿ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ಕೇರ್ ಸೆಂಟರ್ ಡಾ| ಸುರೇಶ್ ಶೆಣಿೈ ಮಾತನಾಡಿ, ನಾವೆಲ್ಲರೂ ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಬೇಕಾಗಿದೆ. ವಿವಿಧ ರೀತಿಯ ಸಮಾಜಿಕ ಚಟುವಟಿಕೆಗಳು ನಮ್ಮ ಮನೋವಿಕಾಸಕ್ಕೆ ಪೂರಕ ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಗೌರವಾಧ್ಯಕ್ಷ ವಿಶ್ವನಾಥ್ ಶೆಣಿೈ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಎ.ಫ್.ಐ ಜಿಲ್ಲಾಧ್ಯಕ್ಷ ಡಾ|| ಎನ್.ಟಿ ಅಂಚನ್, ಪ್ರತಿಷ್ಟಾನದ ಅಧ್ಯಕ್ಷ ಪ್ರೊ.ಶಂಕರ್ ಮುಂತಾದವರಿದ್ದರು.

ಪಿ.ಆರ್.ಸಿ.ಐ ಅಧ್ಯಕ್ಷ ನಾಗರಾಜ್ ಹೆಬ್ಬಾರ್ ಸ್ವಾಗತಿಸಿದರು. ಗಿರೀಶ್ ತಂತ್ರಿ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ರಾಜೇಶ್ ಭಟ್ ಪಣಿಯಾಡಿ, ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply