ಪ್ರತಿಭಟನೆ ಮಾನ್ಯ ಮಾಜಿ ಮುಖ್ಯಮಂತ್ರಿಗಳ ಸಾಂವಿಧಾನಿಕ ಹಕ್ಕಾದರೂ, ಸಾರ್ವಜನಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಕಾನೂನುಗಳನ್ನೇ ಮಾಡಬಾರದು ಎನ್ನುವ ಅಭಿಪ್ರಾಯ ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಟೀಕಿಸಿದರು. ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು ನಮ್ಮ ದೇಶದಲ್ಲಿ ಬಹಳ ಜನ ಇದ್ದಾರೆ” ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಮೊದಲನೇ ಬಾರಿಗೆ ವಾಸ್ತವ ಸಂಗತಿಯನ್ನು ಜನರ ಮುಂದೆ ಇಟ್ಟಿದ್ದಾರೆ
ಮತ್ತು ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಕ್ರಾಸ್ ಜನಾಂಗ ಎನ್ನುವ ಅವರ ಬಹುಸಂಖ್ಯಾತ ಸಮುದಾಯದ ಮೇಲೆ ಮೊಘಲರ ಆಳ್ವಿಕೆಯ ಸಮಯದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ ಮತ್ತು ಬಲಾತ್ಕಾರದ ಮತಾಂತರದ ಸತ್ಯ ಅಡಗಿದೆ ಎನ್ನುವುದು ವಾಸ್ತವ.
ಇಂಥ ದೌರ್ಜನ್ಯ, ಅತ್ಯಾಚಾರ ಮತ್ತು ಬಲಾತ್ಕಾರ ಪ್ರವೃತ್ತಿ ಇಂದಿಗೂ ಮುಂದುವರಿದು ಬಹುಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳನ್ನು ಆಮಿಷಗಳ ಮೂಲಕ ಮದುವೆಯ ನೆಪದಲ್ಲಿ ಮತಾಂತರಿಸಿ ಸಮುದಾಯದ ಸಂಖ್ಯಾತ್ಮಕ ಬೆಳವಣಿಗೆಯ ಷಡ್ಯಂತ್ರವೇ ಲವ್ ಜಿಹಾದ್ ಆಗಿದೆ. ಮುಸ್ಲಿಂ ಮಹಿಳೆಗೆ ಜೀವನಾಂಶ ಕೊಡುವ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಸಂವಿಧಾನವನ್ನೇ ಕಾಂಗ್ರೆಸ್ ಇಂದು ಮೃದು ಹಿಂದುತ್ವದ ಜಪ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಕೈಗನ್ನಡಿಯಾಗಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಅಧಿಕಾರಕ್ಕಾಗಿ ತಾವು ಏರಿದ ಏಣಿಯನ್ನೇ ಧಿಕ್ಕರಿಸಿದ ನೀವು ಬಹುಸಂಖ್ಯಾತ ಸಮುದಾಯವನ್ನು ಬೇಕಾಬಿಟ್ಟಿ ಎಂಬಂತೆ ಪರಿಗಣಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ತಮ್ಮ ಇತ್ತೀಚಿನ ಮೃದು ಹಿಂದುತ್ವದ ಧೋರಣೆಯನ್ನು ಬಹುಸಂಖ್ಯಾತ ಸಮುದಾಯ ಯಾವತ್ತೂ ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ ದಯವಿಟ್ಟು ಉತ್ತರಿಸಿ:
• ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೊಡುವ ಸುಪ್ರೀಂ ಕೋರ್ಟ್ನ ಆದೇಶವನ್ನು ಧಿಕ್ಕರಿಸಿ ನಿಮ್ಮ ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಮೊಟಕುಗೊಳಿಸುದ ಬಗ್ಗೆ ನಿಮ್ಮ ಅಭಿಪ್ರಾಯವೇನು, ಮುಸ್ಲಿಂ ಮಹಿಳೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತ್ರಿವಳಿ ತಲಾಖ್ನ್ನು ಅಪರಾಧವೆಂದು ಪರಿಗಣಿಸುವ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಭಟಿಸುತ್ತಿರುವ ಹಿನ್ನೆಲೆ ಏನು?
•ತಾವು ಮತ್ತು ತಮ್ಮ ಪಕ್ಷ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವಿರಾ? • ಪ್ರೀತಿಸಿ ಮದುವೆಯಾಗಿ ಮೋಸದಿಂದ ಮತಾಂತರಗೊಂಡು ಎಲ್ಲೂ ಇಲ್ಲದಂತಾಗಿರುವ ಹಿಂದೂ ಹೆಣ್ಣುಮಕ್ಕಳ ಮಾನವೀಯ ಹಕ್ಕುಗಳು ಕಸಿದುಕೊಂಡಿರುವ ಷಡ್ಯಂತ್ರದ ವಿರುದ್ಧ ಹಿಂದೂ ಹೆಣ್ಣುಮಕ್ಕಳ ನ್ಯಾಯಕ್ಕಾಗಿ ತಾವು ಧ್ವನಿ ಎತ್ತುವಿರಾ?
•ಈ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ವೈವಾಹಿಕ ಜೀವನದ ನಂತರ ದೊರಕಬೇಕಾದ ಸಮಾನ ಹಕ್ಕುಗಳಕುರಿತು ನಿಮ್ಮ ಅಭಿಪ್ರಾಯವೇನು? • ಸುಪ್ರೀಂ ಕೋರ್ಟ್ ನಿರಂತರವಾಗಿ ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಸರಕಾರಗಳಿಗೆ ನಿರ್ದೇಶನನೀಡುತ್ತಿದ್ದರೂ ಹಾಗೂ ಸಮಾನ ನಾಗರಿಕ ಸಂಹಿತೆ ಸಂವಿಧಾನದ ಆಶಯವಾಗಿದ್ದರೂ ನೀವೂ ಸೇರಿದಂತೆ ಕಾಂಗ್ರೆಸ್ ಪಕ್ಷ ಈ ವಿಷಯದ ಕುರಿತು ಪ್ರತಿಭಟಿಸುವುದರ ಹಿಂದೆ ಓಟ್ ಬ್ಯಾಂಕ್ ರಾಜಕಾರಣವಿದೆಯೇ
•”ಈ ದೇಶದ ಲೋಕಸಭೆ ಮತ್ತು ರಾಜ್ಯಸಭೆಯ ಒಪ್ಪಿಗೆಯೊಂದಿಗೆ ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಿ ಜಾರಿಗೊಳಿಸಲಾಗಿದೆ. ಅದರ ವಿರುದ್ಧ ನಿಮ್ಮ ಪ್ರತಿಭಟನೆ ಯಾಕೆ? ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾನ ನ್ಯಾಯ ನೀಡುವ ಸಮಾನ ಕಾಯ್ದೆ ಬೇಕು ಎಂದು ನಿಮಗೆ ಅನಿಸುವುದಿಲ್ಲವೇ?”