ಜೆಸಿಐ ಕಲ್ಯಾಣಪುರ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಸಿಐ ಕಲ್ಯಾಣಪುರ ಹಾಗೂ ಸೀನಿಯರ್ ಚೇಂಬರ್ ಟೆಂಪಲ್ ಸಿಟಿ ಉಡುಪಿ ಹಾಗೂ ನಿಸರ್ಗ ಇಕೋ ಕ್ಲಬ್ ಎಲ್ ವಿ ಪಿ ಶಾಲೆಯ ಸಹಯೋಗದೊಂದಿಗೆ ಎಲ್ ವಿ ಪಿ ಶಾಲೆಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶಾಲಾ ವಠಾರದಲ್ಲಿ ಉಪಯುಕ್ತ ಹಣ್ಣಿನ ಗಿಡಗಳನ್ನು ನೆಟ್ಟು , ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು.

ಎಲ್ಲ ವಿದ್ಯಾರ್ಥಿಗಳಿಗೆ ಉಪಯುಕ್ತ ಗಿಡಗಳನ್ನು ಹಸ್ತಾಂತರಿಸಲಾಯಿತು. ಪರಿಸರದ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಜೆಸಿಐ ಕಲ್ಯಾಣಪುರದ ಅಧ್ಯಕ್ಷೆ ಜೆಸಿ ಜಯಶ್ರೀ ಮಿತ್ರ, ಟೆಂಪಲ್ ಸಿಟಿ ಉಡುಪಿಯ ಅಧ್ಯಕ್ಷರಾದ ಜಗದೀಶ್ ಕೆಮ್ಮಣ್ಣು, ಶಾಲಾ ಮುಖ್ಯೋಪಾಧ್ಯಾಯರಾದ ಲೂಸಿ ಸೋಜ, ಶಿಕ್ಷಕ ವೃಂದದವರು, ಜೆಸಿಐ ಕಲ್ಯಾಣಪುರದ ಪೂರ್ವ ಧ್ಯಕ್ಷರಾದ ಜೆಸಿ ತುಲಸೀದಾಸ್ ಸಾಲಿಯಾನ್, ರಾಜೇಶ್ ಟಿ ಆಚಾರ್ಯ, ಚಿತ್ರಕುಮಾರ್ ಕಾರ್ಯದರ್ಶಿ ಜೆಸಿ ಅನುಸೂಯಾ ಅನಿಲ್ ಉಪಾಧ್ಯಕ್ಷರಾದ ಜೆಸಿ ನಿತ್ಯಾನಂದ, ಸುರೇಶ್ ಅಮೀನ್,ಜೆಜೆಸಿ ಅಧ್ಯಕ್ಷೆ ರೇಚಲ್ ಲುವಿಸ್ ಹಾಗೂ ಟೆಂಪಲ್ ಸಿಟಿಯ ಸದಸ್ಯರು ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply