ಇಂದ್ರಾಳಿ : ಮುದ್ದುರಾಧಾ-ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಇಂಟರಾಕ್ಸ್‌ ಕ್ಲಬ್‌ನ ಆಶ್ರಯದಲ್ಲಿ ಮತ್ತು ರೋಟರಿ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುರಾಧಾ-ಮುದ್ದುಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸುಮಾರು ಅರುವತ್ತು ಪುಟಾಣಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರು ಅಧ್ಯಕ್ಷತೆ ವಹಿಸಿದರು..ಉಡುಪಿ ರೋಟರಿ ಅಧ್ಯಕ್ಷರಾದ ರೊ ದೀಪಾ ಭಂಡಾರಿ ಮುಖ್ಯ ಆತಿಥಿಯಾಗಿದ್ದರು.
ಆಡಳಿತ ಮಂಡಳಿಯ ಸದಸ್ಯ ಶ್ರೀ ಕೆ ರತ್ನಾಕರ ಶೆಣೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ, ರೋಟರಿಯ ಚೇರಾನ್ ಗುರುರಾಜ್ ಭಟ್, ರೋಟರಿ ಕಾರ್ಯದರ್ಶಿ ರೂ. ಶುಭಾ ಎಸ್ ಭಾಸ್ತಿ, ಉಡುಪಿ ರೋಟರಿಯ ಸದಸ್ಯರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಯಾ, ಇಂಟರಾಕ್ಸ್‌ ಕ್ಲಬ್‌ನ ಅಧ್ಯಕ್ಷ ರಜತ್
ಜಿ ರಾವ್ ಕಾರ್ಯದರ್ಶಿ ಪ್ರಗತಿ ಮಲ್ಯ, ಇಂಟರಾಕ್ಸ್ ಕ್ಲಬ್‌ನ ಶಾಲಾ ಸಂಯೋಜಕಿ ಶ್ರೀಮತಿ ಶಿಲ್ಪಾ ಕಾಮತ್ ಉಪಸ್ಥಿತರಿದ್ದರು.

ಕು! ವೈಷ್ಣವಿ ಸ್ವಾಗತಿಸಿ, ಕು| ಮಾನ್ಯ ವಂದಿಸಿದರು. ಕು ಶ್ರೀಯಾ ಕಾರ್ಯಕ್ರಮವನ್ನು
ನಿರೂಪಿಸಿದರು.

 
 
 
 
 
 
 
 
 
 
 

Leave a Reply