ಹೊಸ ಬೆಳಕು ಆಶ್ರಮಕ್ಕೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಭೇಟಿ

ಉಡುಪಿ: ಮಣಿಪಾಲ ದ ಸರಳೆಬೆಟ್ಟು ನಲ್ಲಿರುವ ಹೊಸ ಬೆಳಕು ಆಶ್ರಮಕ್ಕೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಭೇಟಿ ನೀಡಿದರು.
ಹೊಸ ಬೆಳಕು ಆಶ್ರಮದ ಸಹಸಂಚಾಲಕ ವಿನಯ್ ಚಂದ್ರ ಸಾಸ್ತಾನ, ಅರುಣ್ ಕುಮಾರ್ ಕಲ್ಗದ್ದೆ ಅವರನ್ನು ಸ್ವಾಗತಿಸಿ ಆಶ್ರಮಕ್ಕೆ ಬರಮಾಡಿಕೊಂಡರು. ಹಲವು ವರ್ಷಗಳಿಂದ ನಿರ್ಗತಿಕರ ಸೇವೆಯಲ್ಲಿ ತೊಡಗಿರುವ ಹೊಸ ಬೆಳಕು ಆಶ್ರಮಕ್ಕೆ ಭೇಟಿ ನೀಡಿದ ಅವರು ಆಶ್ರಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ನಂತರ ಅವರು ಮುಂದಿನ ದಿನಗಳಲ್ಲಿ ಇಲಾಖೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

 
 
 
 
 
 
 
 
 
 
 

Leave a Reply