ಉಡುಪಿ :- ಕ್ರಿಸ್ಮಸ್ ಆಚರಣೆ ಕಾಯ೯ಕ್ರಮ ವಿಶಿಷ್ಟವಾಗಿ ಚೇರ್ಕಾಡಿಯ ಜಾರು ಜೆಡ್ಡು ಜನತಾ ನಗರ ದಲ್ಲಿ ಡಿ.25ರಂದು ನಡೆಯಿತು. ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲೆ ವಸಂತಿ ಬಾಯಿ ಮಾತನಾಡಿ, ಈ ರೀತಿಯಲ್ಲಿ ಸಾವ೯ಜನಿಕವಾಗಿ ಹಬ್ಬದ ಆಚರಣೆ ಉತ್ತಮ ಪ್ರಕ್ರಿಯೆಯಾಗಿದೆ. ಸಮಾಜಕ್ಕಾಗಿ ಸಹಾಯ ಮಾಡುವ ಪ್ರವೃತ್ತಿ ನಿಜಕ್ಕೂ ಶ್ರೇಷ್ಠ ಎಂದರು.
ಸಂಸ್ಥೆಯ ಪ್ರಯುಖರಾದ ಡಾI ಶಶಿಕಿರಣ್ ಶೆಟ್ಟಿ ಸಂಸ್ಥೆಯ ಕಾಯ೯ಕ್ರಮಗಳ ವಿವರಗಳನ್ನು ತಿಳಿಸಿದರು. ವೇದಿಕೆಯಲ್ಲಿ ಸುಚಿತ್ರಾ,ಬಂಗಾರಪ್ಪ, ಡಾI ಸುಮಾ ಶೆಟ್ಟಿ ಮುಂತಾದವರಿದ್ದರು. ನಂತರ ಮಕ್ಕಳ ಪ್ರತಿಭಾ ಪ್ರದಶ೯ನ ಮತ್ತು ಬಹುಮಾನ ವಿತರಣಿ, ಆಥಿ೯ಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾಥಿ೯ಗೆ ವಿದ್ಯಾಥಿ೯ ವೇತನ, ವಸ್ತ್ರದಾನ ಕಾಯ೯ಕ್ರಮ ಮತ್ತು ಸಹ ಬೋಜನ ನಡೆಯಿತು.
ಕಾಯ೯ಕ್ರಮಲ್ಲಿ ರಾಘವೇಂದ್ರ ಪೂಜಾರಿ, ಸುಜಯ, ನಯನ, ಉದಯ ನಾಯ್ಕ ಮತ್ತು ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.