ಕೋಟ: ಡಾ.ಬಿ.ಆರ್ ಅಂಬೇಡ್ಕರ್ರ 131 ನೇ ಜನ್ಮದಿನವನ್ನು ಬೇಳೂರು ಗ್ರಾಮದ ಗುಳ್ಳಾಡಿಯ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅಂಬೇಡ್ಕರ್ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ದೀಪ ಬೇಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಊರಿನ ಹಿರಿಯ ನಾಗರೀಕರಾದ ಶೇಷ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಬೇಳೂರಿನ ಉಪಾಧ್ಯಕ್ಷ ಜಯಶೀಲ ಶೆಟ್ಟಿ ಮಾತನಾಡಿ ಯುವ ಜನತೆ ಸಂಘಟಿತರಾಗಬೇಕು ಮತ್ತು ಮುಖ್ಯ ವಾಹಿನಿಗೆ ಬರುವಂತೆ ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಕೋಟ ಹೋಬಳಿ ಶಾಖೆಯ ಪ್ರದಾನ ಕಾರ್ಯದರ್ಶಿಗಳಾದ ರಾಜಶೇಖರ ಬತ್ತಡ ಮಾತನಾಡಿ ಸಬಲ ರಾಷ್ಟçಕ್ಕೆ ಅಂಬೇಡ್ಕರ್ ರು ತಿಳಿಸಿದ ಶಿಕ್ಷಣದ ಅನಿವಾರ್ಯತೆ ಹಾಗೂ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ಮುಕ್ತ ರಾಘವೇಂದ್ರ,ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ,ಸಿ.ಎ. ಬ್ಯಾಂಕ್ ಕೋಟ ಸಿಬ್ಬಂದಿ ವಾಸುದೇವ ಕೆ.ಆರ್ ಹಾಗೂ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಗಜೇಂದ್ರ ,ಮತ್ತು ಸಂಘಟಕ ಸುಧೀರ್ ಗುಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.
ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಉಡುಪಿಯ ಉಪನ್ಯಾಸಕ ನಾಗರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ರ ೧೩೧ ನೇ ಜನ್ಮದಿನೋತ್ಸವನ್ನು ಊರಿನ ಹಿರಿಯ ನಾಗರೀಕರಾದ ಶೇಷ ಉದ್ಘಾಟಿಸಿ ಪುಷ್ಭಾರ್ಚನೆಗೈದರು. ್ಲ ಗ್ರಾ.ಪಂ. ಸದಸ್ಯೆ ಮುಕ್ತ ರಾಘವೇಂದ್ರ,ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ,ಸಿ.ಎ. ಬ್ಯಾಂಕ್ ಕೋಟ ಸಿಬ್ಬಂದಿ ವಾಸುದೇವ ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು