ಆರ್.ಟಿ.ಓ. ಗಂಗಾಧರ್ ಅವರಿಗೆ ಬೀಳ್ಕೊಡುಗೆ

ಉಡುಪಿ: ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗವಾಗಿರುವ ಉಡುಪಿ ಆರ್.ಟಿ.ಓ. ಜೆ. ಪಿ. ಗಂಗಾಧರ್ ಅವರಿಗೆ ಮಣಿಪಾಲದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಬೀಳ್ಕೊಡಲಾಯಿತು.
ಕಚೇರಿ ಸಿಬಂದಿ, ಜಿಲ್ಲೆಯ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಮತ್ತು ಉಡುಪಿ ನಾಗರಿಕರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಗಂಗಾಧರ್ ಅವರು ತನ್ನ ಸೇವಾವಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ನಿವೃತ್ತ ಹಿರಿಯ ವಾಹನ ಪರಿವೀಕ್ಷಕ ಚೆನ್ನಪ್ಪ ಬಿ.ಎಸ್., ಎಸ್.ಡಿ.ಎ. ಶಾಂತರಾಜು, ವಾಹನ ಪರಿವೀಕ್ಷಕ ಸಂತೋಷ ಶೆಟ್ಟಿ, ಕಚೇರಿ ವ್ಯವಸ್ಥಾಪಕಿಯರಾದ ಸರಸ್ವತಿ, ಪಮಿತಾ ಶೆಟ್ಟಿ ಮತ್ತು ಗೀತಾ ಕೆ. ಹಾಗೂ ಸಿಬಂದಿಗಳಾದ ರಾಜೇಶ್ ವಿ. ಶೇಟ್, ಆರತಿ ಆರ್ ಹೆಗ್ಡೆ, ಸುಧಾಂಶು, ಗಣೇಶ ರಾವ್ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply