ಶ್ರೀಕ್ಷೇತ್ರ ಕೊಲ್ಲೂರು ಮಹಾದೇವಿ ಮೂಕಾಂಬಿಕೆ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ,ಆಕಾಶವಾಣಿ ಕಲಾವಿದರು ಹಾಗೂ ನಾಡಿನ ಪ್ರಸಿದ್ಧ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಮತ್ತು ಬಳಗ ಭಕ್ತಿ ಗಾನಮೃತ ಕಾರ್ಯಕ್ರಮ ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಷಿಗಳಾದ ಮಾನ್ಯ ಶ್ರೀ ಚಂದ್ರಶೇಖರ್ ಶೆಟ್ಟಿ ಕೆರಾಡಿ ಅವರು ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಹಾಗೂ ಯುವ ಗಾಯಕಿ ಪ್ರೊ.ಅಶ್ವಿನಿ ಕಂಚಿನಡ್ಕ ಇವರನ್ನು ಸನ್ಮಾನಿಸಿ ಗೌರವಿಸಿದರು. ಕೀಬೋರ್ಡ್ ಅಲ್ಲಿ ಚಂದ್ರ ಬೈಂದೂರು. ರಿದಮ್ ಪ್ಯಾಡ್ ಅಲ್ಲಿ ಸತೀಶ್ ಆಚಾರ್ಯ ಬಸ್ರೂರು, ಹಾಗೂ ಸಮರ್ಥ ಮಂಗಳೂರು ಕೊಳಲಿನಲ್ಲಿ ಸಹಕರಿಸಿದರು.