ಪುತ್ತಿಗೆ ಶ್ರೀಯವರಿಗೆ ಗಾಂಧಿ ಆಸ್ಪತ್ರೆಯಲ್ಲಿ ಗೌರಾವಾರ್ಪಣೆ

ಜನವರಿ 18ರಂದು ಸರ್ವಜ್ಞ ಪೀಠ ಏರಲಿರುವ ಪುತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಸೋಮವಾರದಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಸ್ವಾಮೀಜಿಗಳನ್ನು ಗೌರವಿಸಿ, ಅಶ್ವಥ ಎಲೆಯ ಮೇಲೆ ಗೀತೋಪದೇಶದ ಕೆತ್ತನೆ ಇರುವ ಬೆಳ್ಳಿಯ ಕಲಾಕೃತಿಯನ್ನು ನೀಡಿದರು.

ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಗಾಂಧಿ ಆಸ್ಪತ್ರೆ ಉಡುಪಿಯ ಹೆಮ್ಮೆ. ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ, ತಮ್ಮ ವೈದ್ಯಕೀಯ ಸೇವೆಯೊಂದಿಗೆ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ವ್ಯಾಸರಾಜ ತಂತ್ರಿ, ಹಯವದನ ಭಟ್, ಡಾ.ವೈ.ಎಸ್.ರಾವ್, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ ಹಾಗು ಇನ್ನಿತರರು ಉಪಸ್ಥಿತರಿದ್ದರು. ಹಲವು ಮಂದಿ ಕೋಟಿ ಗೀತಾ ಯಜ್ಞ ಲೇಖನದ ದೀಕ್ಷೆ ಪಡೆದರು.

 
 
 
 
 
 
 
 
 
 
 

Leave a Reply