ಇಂಡಿಯಾ ಬುಕ್ ಅಪ್ ರೆಕಾರ್ಡ್ ನಲ್ಲಿ ಗುರುತಿಸಿ ಕೊಂಡ ಗಗನ್ ಇವರಿಗೆ ಅಭಿನಂದನೆ 

ಕೊಡವೂರಿನ ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರನಾದ ಗಗನ್ ಜೆ ಸುವರ್ಣ ಇವರು ಸ್ಟ್ರಿಂಗ್ ಆರ್ಟ್ ( ನೂಲು ಕಲೆಯಲ್ಲಿ) ವಿಶಿಷ್ಟ ಸಾಧನೆ ಮಾಡಿದ್ದು, ಇವರಿಗೆ ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು.

ಗಗನ್ ಇವರು ವಾಣಿಜ್ಯ ವಿಭಾಗದಲ್ಲಿ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಸುಮಾರು 200.00 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500.00 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ  ಪುಟ್ಟ ಪ್ರತಿಕೃತಿಯನ್ನು ರಚಿಸಿ ಇಂಡಿಯಾ ಬುಕ್ ಅಪ್ ರೆಕಾರ್ಡ್ ನಲ್ಲಿ ಗುರುತಿಸಿದ್ದಾರೆ.

ಈ ಸಂದರ್ಬದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಶ್ರೀ ಶಂಕರನಾರಾಯಣ ದೇವಸ್ಥಾನದ ಸದಸ್ಯರಾದ ಜೀವನ್,ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಪ್ರಭಾತ್ ಕೊಡವೂರು, ಚಂದ್ರವತಿ ಕಾನಂಗಿ,ಸುರೇಶ್  ಮಹಾಗಣಪತಿ ಫೈಟಿಂಗ್, ತೆಂಕನಿಡಿಯೂರು ಕಾಲೇಜಿನ ಶಿಕ್ಷಕಿಯಾದ ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply