ವಿಬುಧಪ್ರಿಯ ನಾಗಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಸೋಮವಾರ 27-11-23 ರಂದು ದೀಪೋತ್ಸವ ಮತ್ತು ಸತ್ಯನಾರಾಯಣ ಪೂಜೆ ಸಹಿತ ಮಹಾರಂಗ ಪೂಜೆಯು ವಿಬುಧಪ್ರಿಯ ನಾಗಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸತ್ಯನಾರಾಯಣ ಪೂಜೆಯು ಅರ್ಚಕರಾದ ನಂದನ್ ಭಟ್ ಕುಂಜಿತ್ತಾಯ ಅವರ ನೇತೃತ್ವದಲ್ಲಿ ಎ.ಕೆ ರಾವ್ ಅವರ ಸಹಯೋಗದೊಂದಿಗೆ , ತದನಂತರ ಮಹಾರಂಗ ಪೂಜೆಯು ಅರ್ಚಕರಾದ ಶ್ರೀಧರ್ ಭಟ್ ನೇತೃತ್ವದಲ್ಲಿ ನಾರಾಯಣ ಉಪಾಧ್ಯಾಯ ಅವರ ಸಹಯೋಗದೊಂದಿಗೆ ಭಕ್ತಿಯಿಂದ ನಡೆಯಿತು.

ಸತ್ಯನಾರಾಯಣ ಪೂಜೆ ಮತ್ತು ಮಹಾರಂಗ ಪೂಜೆಯ ಸರ್ವ ಜವಾಬ್ದಾರಿಯನ್ನು ಮಹನೀಯರಾದ ಎಚ್. ಕೃಷ್ಣ ಭಟ್ ಮತ್ತು ಶ್ರೀಮತಿ ಜಯಂತಿ ಕೃಷ್ಣ ಭಟ್ ವಹಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ್ ಆಚಾರ್ಯ, ಕಾರ್ಯದರ್ಶಿಯಾದ ವಿಶ್ವನಾಥ ಶಾನುಭೋಗ, ಸಮನ್ವಯಕಾರರಾದ ಬಾಬು ಮಣಿಪಾಲ ಮತ್ತು ಊರಿನ ಗುರು ಹಿರಿಯರು ನೂರಾರು ಭಕ್ತರ ಸಮ್ಮುಖದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು. ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಯಂ ಸೇವಕರ ತಂಡದಿಂದ ನೆರೆದಿದ್ದ ಭಕ್ತಾಭಿಮಾನಿಗಳಿಗೆ ಪ್ರಸಾದ ವಿತರಿಸಲಾಯಿತು.

 
 
 
 
 
 
 
 
 
 
 

Leave a Reply