ಮಾರ್ಗ ರಚನೆಗಾಗಿ ಗ್ರಾಮ ಸಭೆ ಕೊಡವೂರು

ಮೂಲ ಸೌಕರ್ಯವಾಗಿರುವಂತಹ ನೀರು ಬೆಳಕು ಮತ್ತು ರಸ್ತೆ ಹಾಗೂ ಗ್ರಾಮದ ಸಮಸ್ಯೆಗಳನ್ನು ತಿಳಿಯುವ ನಿಟ್ಟಿನಲ್ಲಿ ಚಿಕ್ಕ ಚಿಕ್ಕ ಮೀಟಿಂಗ್ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣಕ್ಕಾಗಿ ಆ ಭಾಗದ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಅಲ್ಲಿಯ ಅವಶ್ಯಕತೆ /ಅನಿವಾರ್ಯತೆಯನ್ನು ಪೂರೈಸುವುದು ನನ್ನಂತಹ ಜನಪ್ರತಿನಿಧಿ ಜವಾಬ್ದಾರಿ. ಹೊಸ ಮಾರ್ಗದ ರಚನೆಯ ಸಂದರ್ಭದಲ್ಲಿ ಬರುವಂತಹ ಅಡೆ-ತಡೆಗಳನ್ನು ನಿವಾರಿಸಲು ಎಲ್ಲಾ ನಾಗರಿಕರನ್ನು ಸೇರಿಸುವುದರ ಮುಖಾಂತರ ಇದನ್ನು ತಡೆಯಲು ಸಾಧ್ಯ ಇದೆ, ಮತ್ತು ಸರಕಾರದಿಂದ ಬರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ನಾಗರಿಕರನ್ನು ಸೇರಿಸಿದರೆ ಯಾವುದೇ ಕಾರಣಕ್ಕೂ ದುಂದು ವೆಚ್ಚವಾಗುವುದಿಲ್ಲ, ಈ ನಿಮಿತ್ತ ಕುಡರ್ ತೋಟದ ನಾಗರಿಕರನ್ನು ಸೇರಿಸಿಕೊಂಡು ಒಂದು ಕಿಲೋಮೀಟರ್ ರಸ್ತೆ ನಿರ್ಮಾಣವಾಗುವ ಅವಶ್ಯಕತೆ ಇದೆ. ಈವರೆಗೆ ರಸ್ತೆ ಸಂಪರ್ಕ ಇಲ್ಲದ ಆ ಭಾಗದ ಗ್ರಾಮಸ್ಥರು ಸೇರಿಕೊಂಡು ಅಲ್ಲಿಯ ಮುಂದಿನ ಅಭಿವೃದ್ಧಿ ಕಾರ್ಯದ ಬಗ್ಗೆ ಚಿಂತನೆ ನಡೆಯಿತು.

 
 
 
 
 
 
 
 
 
 
 

Leave a Reply