ಬೆಂಗಳೂರು: ಖಾಸಗಿ ವಾಹಿನಿ ಜೀ ಕನ್ನಡದ ಹದಿನೈದು ವರ್ಷಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು. ಸಿಎಂಗೆ ನೇರ ನೇರವಾಗಿ ಪ್ರಶ್ನೆ ಕೆಳೆದರು. ಮಕ್ಕಳು ಕೇಳಿದ ಪ್ರಶ್ನೆ ಮತ್ತೆ ಅದಕ್ಕೆ ಬೊಮ್ಮಾಯಿ ನೀಡಿದ ಉತ್ತರ ಹೇಗಿದೆ ನೋಡಿ
ಅಂಕಲ್ ನಿಮಗೆ ಯಾವ ತಿಂಡಿ ಇಷ್ಟ?
ನಮ್ಮ ತಾಯಿ ಬಿಸಿ ಬಿಸಿ ಜೋಳದ ರೊಟ್ಟಿ ಮಾಡೋದು ಇಷ್ಟ, ತಿನ್ನುತ್ತಾ ಇದ್ದರೆ ಲೆಕ್ಕವೇ ಇಲ್ಲ… ಈಗ ನಮ್ಮ ತಾಯಿ ಇಲ್ಲ. ಯಾರೇ ರೊಟ್ಟಿ ಮಾಡಿದರೂ ನಮ್ಮ ತಾಯಿ ಮಾಡಿದ್ದಾರೆ ಎಂದುಕೊಂಡು ತಿಂತೇನೆ.
ಅಂಕಲ್ ನೀವು ಯಾವಾಗಲೂ ಬ್ಯುಸಿ ಅಲ್ವಾ.. ಮಕ್ಕಳಿಗೆ ಆನ್ಲೈನ್ಕೊ ಹೇಳಿ ಕೊಡ್ತೀರಾ
ಸರ್ ನಾವು ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ. ಸಿಎಂ ಆ ತರ ಇರ್ತಾರೆ.. ಈ ತರ ಇರ್ತಾರೆ.. ನೀವೇನು ಇಷ್ಟು ಸಿಂಪಲ್ ಆಗಿದ್ದೀರಾ?
ಇದು ಬಹಳ ಕಷ್ಟದ ಪ್ರಶ್ನೆ. ನನ್ನ ಆಲ್ ಟೈಮ್ ಫೆವರೇಟ್ ನಾಯಕಿ ಮಧುಬಾಲ.. ಕನ್ನಡಲ್ಲಿ ಜಯಂತಿ, ಭಾರತಿ, ಕಲ್ಪನಾ ಎಂದು ತಿಳಿಸಿದರು.
ನಿಮ್ಮ ಫೆವರೇಟ್ ಹೀರೋ?
ಡಾ. ರಾಜ್ ಕುಮಾರ್ ಕಣಪ್ಪಾ
ನಿಮ್ಮ ತಂದೆಯಿಂದ ಯಾವ ಪಾಠ ಕಲಿತುಕೊಂಡ್ರಿ?
ಒಂದು ಸಾರಿ ನನ್ನ ತಂದೆಯ ಜತೆ ವಾದ ಮಾಡಿದ್ದೆ. ನಂತರ ಅದರಲ್ಲಿ ನನ್ನ ತಪ್ಪಿರುವುದು ಗೊತ್ತಾಯಿತು. ನಂತರ ಬೇಗ ಕೋಪ ಮಾಡಿಕೊಳ್ಳಬಾರದು. ಕೋಪದ ಕೈಗೆ ಬುದ್ದಿ ಕೊಡಬಾರದು. ಪುಸ್ತಕ ಓದುವುದನ್ನು ಕಲಿ ಎಂದರು. ಅಲ್ಲಿಂದ ಅದನ್ನು ಪಾಲಿಸಿಕೊಂಡು ಬಂದೆ.
ನಿಮ್ಮ ಫೆವರೇಟ್ ಹಾಡು ಯಾವುದು?
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು.. ಇನ್ನೊಂದು ಫೆವರೇಟ್ ಹಾಡು ಬಾನಿಗೊಂದು ಎಲ್ಲೇ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ.. ಏಕೆ ಕನಸು ಕಾಣುವೆ..ನಿಧಾನಿಸು ನಿಧಾನಿಸು.. ನಿಯೆಂದು ಮಕ್ಕಳಿಗೆ ಹಾಡಿ ತೋರಿಸಿದರು.
ನಾನು ಸಿಎಂ… ಸಿಎಂ ಅಂದರೆ ಕಾಮನ್ ಮ್ಯಾನ್ … ಇಷ್ಟು ಹೇಳಿದ ಬೊಮ್ಮಾಯಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು.